ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನದಿಗೆ ಹಾರಿದ ಕುಂದಾಪುರದ ಉದ್ಯಮಿ: ಮುಂದುವರೆದ ಶೋಧ ಕಾರ್ಯ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜನವರಿ 27: ಹೋಟೆಲ್ ಉದ್ಯಮಿಯೋರ್ವರು ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕುಂದಾಪುರದಲ್ಲಿ ನಡೆದಿದೆ‌.

ಕುಂದಾಪುರದ ಚಿಕ್ಕನ್ಸಾಲ್ ರಸ್ತೆ ನಿವಾಸಿ ಕೆ.ಜಿ. ಗಣೇಶ್ (51) ನದಿಗೆ ಹಾರಿದ ಉದ್ಯಮಿ. ಕುಂದಾಪುರದ ರಾಷ್ಟ್ರೀಯ ಹೆದ್ದಾರಿ 66 ರ ಸಂಗಮ ಸಮೀಪದ ಹೇರಿಕುದ್ರು ಸೇತುವೆ ಮೇಲಿಂದ ನಿನ್ನೆ ಸಂಜೆ ನದಿಗೆ ಹಾರಿದ್ದರು.

Kundapura Businessman Who Jumped Into The River

ಕೆಎಎಸ್ ಅಧಿಕಾರಿ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು!ಕೆಎಎಸ್ ಅಧಿಕಾರಿ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು!

ತಡರಾತ್ರಿವರೆಗೆ ಹುಡುಕಾಟ ನಡೆಸಿದ್ದರೂ, ಇದುವರೆಗೆ ಉದ್ಯಮಿ ದೇಹ ಪತ್ತೆಯಾಗಿಲ್ಲ. ತನ್ನ ಮನೆಯಿಂದ ಆಟೋ ರಿಕ್ಷಾದಲ್ಲಿ ಬಂದಿದ್ದ ಗಣೇಶ್, ಹೇರಿಕುದ್ರು ಸೇತುವೆಯಲ್ಲಿ ಇಳಿದು ನಡೆದುಕೊಂಡು ಹೋಗಿದ್ದಾರೆ.

Kundapura Businessman Who Jumped Into The River

ಅಲ್ಲಿ ಪರ್ಸ್, ಚಪ್ಪಲಿ, ಕನ್ನಡಕ ಇಟ್ಟು ಎಲ್ಲರೂ ನೋಡ ನೋಡುತ್ತಿದ್ದಂತೆ ಸೇತುವೆಯಿಂದ ನದಿಗೆ ಹಾರಿದ್ದಾರೆ. ಇದನ್ನು ನೋಡಿದ ಕೂಡಲೇ ನದಿಯಲ್ಲಿ ದೋಣಿ ಮೂಲಕ ಮೀನು ಹಿಡಿಯುತ್ತಿದ್ದ ಮೀನುಗಾರರು ರಕ್ಷಿಸಲು ಯತ್ನಿಸಿದ್ದಾರಾದರೂ ಉದ್ಯಮಿ ಗಣೇಶ್ ದೇಹ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಇದೀಗ ಶೋಧಕಾರ್ಯ ಮುಂದುವರೆದಿದೆ.

English summary
The incident happened in Kundapur a hotel businessman who jumped from a bridge to the river tried to commit suicide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X