ಯಕ್ಷಗಾನಕ್ಕೂ ಬಂತು "ಮಗನೇ ಎಲ್ಲಿದ್ದೀಯಪ್ಪ"? ಡೈಲಾಗ್
ಉಡುಪಿ, ಮಾರ್ಚ್ 17: ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ರಾಜಕೀಯ ಪಾಳಯಗಳಲ್ಲಿ ನಡೆಯುವ ಘಟನಾವಳಿಗಳು ಯಕ್ಷಗಾನ ಪ್ರಸಂಗಗಳಲ್ಲಿ ವ್ಯಕ್ತವಾಗುತ್ತಿವೆ. ಇದಕ್ಕೆ ಇನ್ನೊಂದು ಸೇರ್ಪಡೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಪ್ರವೇಶ ಪ್ರಸಂಗ.
ಮಂಡ್ಯದಲ್ಲಿ ಮಗನ ಸ್ಪರ್ಧೆ; ಎಚ್ ಡಿಕೆಯಿಂದ ಡಿವಿಎಸ್, ಬಿಎಸ್ ವೈ ಉದಾಹರಣೆ
ಮಂಡ್ಯದಲ್ಲಿ ಆಯೋಜಿಸಲಾಗಿದ್ದ ನಿಖಿಲ್ ಕುಮಾರಸ್ವಾಮಿ ಅಭಿನಯದ 'ಜಾಗ್ವಾರ್' ಚಿತ್ರದ ಆಡಿಯೋ ರಿಲೀಸ್ ಸಂದರ್ಭ ಕುಮಾರಸ್ವಾಮಿ "ಮಗನೇ ಎಲ್ಲಿದ್ದೀಯಾ?" ಅಂತ ವೇದಿಕೆ ಮೇಲಿಂದ ಕರೆಯುತ್ತಾರೆ. ಈ ಸಂದರ್ಭದಲ್ಲಿ ನಿಖಿಲ್ ಜನಗಳ ಮಧ್ಯೆ ಎದ್ದು ನಿಂತು "ನಾನಿಲ್ಲಿದ್ದೀನಪ್ಪಾ" ಅಂತ ಹೇಳಿದ್ದಾರೆ. ಮಂಡ್ಯಕ್ಕೆ ನಿಖಿಲ್ ಅಭ್ಯರ್ಥಿ ಆದ್ಮೇಲೆ ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದೀಗ ಯಕ್ಷಗಾನದಲ್ಲೂ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರ ಸ್ವಾಮಿ ಅವರ ನಡುವಿನ ಈ ಡೈಲಾಗ್ ಹರಿದಾಡುತ್ತಿದೆ. ಬಪ್ಪನಾಡು ಕ್ಷೇತ್ರದ ಯಕ್ಷಗಾನ ಪ್ರಸಂಗ ಕಾಪುವಿನ ಪಳ್ಳಿಯಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಹಾಸ್ಯ ಪಾತ್ರಧಾರಿ ಕುಮಾರಸ್ವಾಮಿ ಡೈಲಾಗ್ ಹೇಳಿ ನೆರೆದವರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. "ಮಗನೇ ಎಲ್ಲಿದ್ದೀಯಪ್ಪಾ"?ಅಂದಾಗ ಪ್ರೇಕ್ಷಕರಿಂದ ಸಿಳ್ಳೆ ಚಪ್ಪಾಳೆ ಬಂದಿದೆ. ಹಲವಾರು ವೀಡಿಯೋಗಳಿಗೆ ನಿಖಿಲ್- ಕುಮಾರಸ್ವಾಮಿ ವೀಡಿಯೋ ಎಡಿಟ್ ಮಾಡಿ ಜನ ಟ್ರೋಲ್ ಮಾಡುತ್ತಿದ್ದಾರೆ.