ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಪುಲ್ವಾಮಾ ದಾಳಿ ಬಗ್ಗೆ ಎಚ್‌ಡಿಕೆಗೆ ರೇವಣ್ಣನೇ ಭವಿಷ್ಯ ಹೇಳಿರಬೇಕು'

|
Google Oneindia Kannada News

Recommended Video

ನಾಲ್ಕು ನಿಂಬೆ ಹಣ್ಣು ಕೈಯಲ್ಲಿ ಹಿಡ್ಕೊಂಡು ಕುಮಾರಸ್ವಾಮಿಗೆ ಭವಿಷ್ಯ ಹೇಳಿದ್ರಂತೆ ರೇವಣ್ಣ..!

ಉಡುಪಿ, ಏಪ್ರಿಲ್ 06: ಪುಲ್ವಾಮಾ ಉಗ್ರರ ದಾಳಿ ಘಟನೆ ಬಗ್ಗೆ ಮೊದಲೇ ಗೊತ್ತಿತ್ತೆಂಬ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪುಲ್ವಾಮಾ ಉಗ್ರರ ದಾಳಿ ಘಟನೆ ಬಗ್ಗೆ ಅವರಣ್ಣ ರೇವಣ್ಣ ಭವಿಷ್ಯ ಏನಾದರೂ ಹೇಳಿದ್ದರಾ? ಎಂದು ಅವರು ವ್ಯಂಗ್ಯವಾಡಿದ್ದಾರೆ. ಎಡಗೈಯ್ಯಲ್ಲಿ ನಾಲ್ಕು , ಬಲಗೈಯ್ಯಲ್ಲಿ ನಾಲ್ಕು ನಿಂಬೆ ಹಣ್ಣು ಹಿಡ್ಕೊಂಡು ರೇವಣ್ಣ ಭವಿಷ್ಯ ಹೇಳಿರಬಹುದು ಎಂದು ಕಿಡಿಕಾರಿದ ಅವರು ಮುಖ್ಯಮಂತ್ರಿ ಜವಾಬ್ದಾರಿ ಮತ್ತು ಹೊಣೆಗಾರಿಕೆಯಿಂದ ವರ್ತಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುಲ್ವಾಮಾ ದಾಳಿ ಬಗ್ಗೆ 2 ವರ್ಷದ ಹಿಂದೆಯೇ ಎಚ್‌ಡಿಕೆಗೆ ಗೊತ್ತಿತ್ತು ಪುಲ್ವಾಮಾ ದಾಳಿ ಬಗ್ಗೆ 2 ವರ್ಷದ ಹಿಂದೆಯೇ ಎಚ್‌ಡಿಕೆಗೆ ಗೊತ್ತಿತ್ತು

ಪುಲ್ವಾಮ ಘಟನೆ ಬಗ್ಗೆ ಗೊತ್ತಿದ್ರೆ ಎರಡು ವರ್ಷದ ಮೊದಲೇ ಹೇಳಬೇಕಿತ್ತು. ಚುನಾವಣೆ ಸಂದರ್ಭದಲ್ಲಿ ಹೇಳುವ ಅಗತ್ಯ ಏನಿತ್ತು? ಎಂದು ಅವರು ಪ್ರಶ್ನಿಸಿದರು.

ಕುಮಾರಸ್ವಾಮಿ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅರ್ಹರಲ್ಲ: ಕೋಟ ಶ್ರೀನಿವಾಸ್ ಪೂಜಾರಿಕುಮಾರಸ್ವಾಮಿ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅರ್ಹರಲ್ಲ: ಕೋಟ ಶ್ರೀನಿವಾಸ್ ಪೂಜಾರಿ

Kota Srinivas Poojari slams CM Kumaraswamy on his Pulwama statement


ರಾಜ್ಯದಲ್ಲಿ ಮೈತ್ರಿಯೆಂಬ ತೇಪೆಯೊಳಗೆ ಎಲ್ಲಾ ಒಡೆದಿದೆ. ಮಂಡ್ಯ ಗೆಲ್ಲುವುದಿಲ್ಲ ಎಂಬೂದು ಸಿಎಂ ಗೆ ಗೊತ್ತಾಗಿದೆ. ತುಮಕೂರು, ಹಾಸನ ಕಷ್ಟವಿದೆ ಅಂತ ಸಿಎಂ ಗೆ ಅರಿವಾಗಿದೆ ಎಂದು ಅವರು ಹೇಳಿದರು. ಜೆಡಿಎಸ್ ನ ಕೌಟುಂಬಿಕ ರಾಜಕಾರಣದ ಕೊನೆಯ ದಿನಗಳು ನಡೆಯುತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟರು.

English summary
Speaking to media persons in Udupi MLC Kota Srinivas Poojari slammed CM Kumarasawmy over his statement on Pulwama terror attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X