ಲಾಕ್ ಡೌನ್ ವಿಸ್ತರಣೆ; ಮುಂಬೈನಲ್ಲಿ ಉಡುಪಿ ಅರ್ಚಕ ಆತ್ಮಹತ್ಯೆ
ಉಡುಪಿ, ಏಪ್ರಿಲ್ 15: ನಿನ್ನೆ ಮೇ 3ರವರೆಗೂ ಲಾಕ್ ಡೌನ್ ಅನ್ನು ವಿಸ್ತರಿಸಿದ್ದು, ಊರಿಗೆ ಬರಲಾಗದೇ ಮುಂಬೈನಲ್ಲಿ ಉಡುಪಿ ಮೂಲದ ಅರ್ಚಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
Recommended Video
ಆರೋಗ್ಯ
ಸೇತು
ಆಪ್
ನಿಂದ
ಆಗುವ
ಪ್ರಯೋಜನಗಳ
ಬಗ್ಗೆ
ಜಗದೀಶ್
ಶೆಟ್ಟರ್
ಏನ್
ಹೇಳಿದ್ದಾರೆ
|
Arogya
setu
|
Stay
home
ಕಾರ್ಕಳ ತಾಲೂಕಿನ ನೀರೆಬೈಲೂರಿನ ಕೃಷ್ಣ ಶಾಂತಿ (37) ಎಂಬುವರು ಮುಂಬೈನ ಕಾಂದಿವಿಲಿಯಲ್ಲಿನ ಭದ್ರಕಾಳಿ ದೇವಸ್ಥಾನಕ್ಕೆ ತಾತ್ಕಾಲಿಕವಾಗಿ ಪೂಜೆಗೆ ತೆರಳಿದ್ದರು. ಆದರೆ ಮಾನಸಿಕ ಖಿನ್ನತೆಯಿಂದ ಅವರು ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಡುಬಿದ್ರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜೀವಬಿಟ್ಟ ವಿದ್ಯಾರ್ಥಿನಿ
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೇ 3ರವರೆಗೂ ಲಾಕ್ ಡೌನ್ ಅನ್ನು ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಅತ್ತ ದೇವಸ್ಥಾನದಲ್ಲಿ ಪೂಜೆ ನಡೆಯದೇ, ಇತ್ತ ಊರಿಗೂ ಬರಲಾಗದೇ ಅವರು ಸಂಕಟ ಪಡುತ್ತಿದ್ದುದಾಗಿ ತಿಳಿದುಬಂದಿದೆ. ಊರಿಗೆ ಬರಲಾಗದೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಂಶಯ ವ್ಯಕ್ತಗೊಂಡಿದೆ. ಇವರು ಮಾ.17 ರಂದು ಮುಂಬೈಗೆ ತೆರಳಿದ್ದರು.
Comments
English summary
Karkala based priest krishna shanthi committed suicide in mumbai,