ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ಕನಕನ ಗುಡಿಗೆ ಕಾಲ ಸನ್ನಿಹಿತ; ಕನಕ ಭಕ್ತರಲ್ಲಿ ಪುಳಕ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ನವೆಂಬರ್ 15: ಕನಕ ಜಯಂತಿಯಾದ ಇಂದು ಬೆಂಗಳೂರಿನಿಂದ ಕನಕ ಸದ್ಭಾವನಾ ಯಾತ್ರೆಯು ಉಡುಪಿ ತಲುಪಿದ್ದು, ಅಪಾರ ಸಂಖ್ಯೆಯ ಕನಕ ಭಕ್ತರು ಪಾಲ್ಗೊಂಡಿದ್ದರು.

"ಕನಕನ ಬಂಡೆ"; ಕನಕನ ಕಥೆ ಹೇಳುವ ಮಹದೇವಪುರದ ದೇಗುಲ

ಉಡುಪಿ ಶ್ರೀಕೃಷ್ಣಮಠದಲ್ಲಿ ಕನಕದಾಸರಿಗೆ ಗೌರವವಿಲ್ಲ, ಭಕ್ತ ಕನಕನಿಗೆ ಸರಿಯಾದ ಪೂಜೆ ಸಲ್ಲುತ್ತಿಲ್ಲ ಎಂಬೆಲ್ಲಾ ಆರೋಪಗಳ ಪಟ್ಟಿಯೇ ಇತ್ತು. ಈ ವಿಚಾರದಲ್ಲಿ ಬಹಳ ಗೊಂದಲಗಳು, ಆರೋಪ ಪ್ರತ್ಯಾರೋಪಗಳು ನಡೆಯುತ್ತಲೇ ಇವೆ. ಈ ಮಧ್ಯೆ ಬೆಂಗಳೂರಿನ ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆ ಇಂದು ಉಡುಪಿಗೆ ತಲುಪಿತು. ವರ್ಷಂಪ್ರತಿಯಂತೆ ಈ ಸಲವೂ ಕನಕ ಭಕ್ತರು ಸದ್ಭಾವನಾ ಜ್ಯೋತಿ ರಥಯಾತ್ರೆ ಮೂಲಕ ಕೃಷ್ಣಮಠದ ಕನಕ ಗೋಪುರಕ್ಕೆ ಬಂದು ಪೂಜೆ ಸಲ್ಲಿಸಿದರು. ಪರ್ಯಾಯ ಪಲಿಮಾರು ಶ್ರೀಗಳು ಕನಕದಾಸರ ಮೂರ್ತಿಗೆ ಪೂಜೆ ನೆರವೇರಿಸಿದರು.

Kanaka Sadbhavana Yatra Reached Udupi Today

ರಥಬೀದಿಯಲ್ಲಿ ಕನಕದಾಸರಿಗೊಂದು ದೇವಸ್ಥಾನ ನಿರ್ಮಾಣ ಮಾಡಬೇಕು ಎಂಬುದು ಬಹಳ ಹಿಂದಿನ ಬೇಡಿಕೆ. ಇದೀಗ ಮಠದ ಪಾರ್ಶ್ವದಲ್ಲಿರುವ ಕನಕ ಮಂಟಪದಲ್ಲಿ ಬೃಹತ್ ಕನಕ ಮೂರ್ತಿ ಸ್ಥಾಪನೆಗೆ ಕಾಲ ಸನ್ನಿಹಿತವಾಗಿದೆ. ಈ ಸಂಬಂಧ ಸಕಲ ಸಿದ್ಧತೆಗಳೂ ನಡೆದಿವೆ. ಜನವರಿ ನಂತರ ಈ ಕನಸು ನೆರವೇರಲಿದ್ದು ಕನಕ ಭಕ್ತರು ಪುಳಕಗೊಂಡಿದ್ದಾರೆ.

ಸರ್ಕಾರದ ಸ್ಪಷ್ಟನೆ; ಕನಕ ಜಯಂತಿಗೆ ಸರ್ಕಾರಿ ರಜೆ ಇದೆಸರ್ಕಾರದ ಸ್ಪಷ್ಟನೆ; ಕನಕ ಜಯಂತಿಗೆ ಸರ್ಕಾರಿ ರಜೆ ಇದೆ

ಈಗಿರುವ ಕನಕನ ಪುತ್ಥಳಿಯಿರುವ ಸ್ಥಳದಲ್ಲೇ ಹೊಸ ಗುಡಿ ಮತ್ತು ಮೂರ್ತಿ ತಲೆಯೆತ್ತಲಿದೆ. ತಮಿಳು ನಾಡಿನ ಶಿಲ್ಪಿಗಳು ಕೆತ್ತನಾ ಕಾರ್ಯ ಶುರು ಮಾಡಿದ್ದಾರೆ. ಮುಂದಿನ ಕನಕ ಜಯಂತಿ ವೇಳೆಗೆ ಈ ದೇಗುಲ ನಿರ್ಮಾಣವಾಗಿ ಪೂಜೆ ಆರಂಭವಾಗಲಿರುವುದಾಗಿ ತಿಳಿದುಬಂದಿದೆ.

English summary
Kanaka Sadbhavana Yatra Reached Udupi Today. A new temple and a statue of kanaka will be established next year in udupi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X