ಮೈತ್ರಿ ಅಭ್ಯರ್ಥಿ ಎಂಬ ವೈರಲ್ ಸುದ್ದಿಗೆ ಉತ್ತರ ಕೊಟ್ಟ ಜಯಪ್ರಕಾಶ್
ಉಡುಪಿ, ಡಿಸೆಂಬರ್ 08: ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಸುದ್ದಿಗೆ ಕೆ.ಜಯಪ್ರಕಾಶ್ ಹೆಗ್ಡೆ ಉತ್ತರ ನೀಡಿದ್ದಾರೆ.
ಜಯಪ್ರಕಾಶ್ ಹೆಗ್ಡೆ ವಿಧಾನಸಭೆಗೋ ಲೋಕಸಭೆಗೋ? ಇನ್ನೂ ನಡೆ ನಿಗೂಢ
ಉಡುಪಿ ಜಿಲ್ಲೆಯ ಕೋಟಾದಲ್ಲಿ ಮಾತನಾಡಿದ ಅವರು ಇದು ಕೇವಲ ಗಾಳಿ ಸುದ್ದಿಯಲ್ಲ, ಇದು ಸೃಷ್ಟಿ ಮಾಡಿದ ಸುದ್ದಿ ಎಂದು ಕಿಡಿಕಾರಿದರು.ನನ್ನ ಕುರಿತು ಸುದ್ದಿ ಪ್ರಕಟಿಸುವ ಮೊದಲು ನನ್ನ ಬಳಿ ಮಾತನಾಡಿ ಆ ಬಗ್ಗೆ ಸ್ಪಷ್ಟನೆ ಪಡೆದು ಸುದ್ದಿ ಹಾಕಬೇಕು ಎಂದು ಹೇಳಿದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಜತೆ ಒನ್ಇಂಡಿಯಾ ಕನ್ನಡ ಸಂದರ್ಶನ
ಸುಮ್ಮನೆ ಊಹಾಪೋಹಗಳನ್ನೇಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರೆ ನಮ್ಮ ಕಾರ್ಯಕರ್ತರಿಗೆ ಗೊಂದಲವಾಗುತ್ತದೆ. ನಾನು ಸಂಸದನಾಗಿದ್ದಲೂ ಕೂಡ ಅಹಮದ್ ಪಟೇಲ್ ಅವರನ್ನು ಭೇಟಿಯಾಗಿದ್ದೆ. ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಗಳು. ಅವರ ಭೇಟಿಯನ್ನು ತಪ್ಪಾಗಿ ಅರ್ಥೈಸಬೇಡಿ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅವಕಾಶ ನೀಡಿದರೆ ಮತ್ತೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಅಭ್ಯರ್ಥಿಯಾಗುತ್ತೇನೆ, ಇದು ಪಕ್ಷಕ್ಕೆ ಬಿಟ್ಟ ತಿರ್ಮಾನ ಎಂದು ಅವರು ಸ್ಪಷ್ಟ ಪಡಿಸಿದರು.