ಬಾಲಕಿಯ ಕಿಡ್ನಿ ಚಿಕಿತ್ಸೆಗೆ ವೇಷ ತೊಟ್ಟ ಯುವಕರ ತಂಡ
ಉಡುಪಿ, ಅಕ್ಟೋಬರ್ 8: ಹೊಟ್ಟೆಪಾಡಿಗಾಗಿ ಜನರು ನಾನಾ ವೇಷ ಹಾಕುವುದು ಸಾಮಾನ್ಯ. ಆದರೆ ಉಡುಪಿಯ ಈ ಯುವಕರ ತಂಡ ಬಾಲಕಿಯೊಬ್ಬಳ ಕಿಡ್ನಿಯ ಚಿಕಿತ್ಸೆಗಾಗಿ ವೇಷ ಹಾಕಿ ಧನ ಸಹಾಯ ಯಾಚಿಸುತ್ತಿದೆ. ವೇಷ ಹಾಕುವುದು ಒಬ್ಬ ಯುವಕನಾದರೂ ಅನೇಕ ಯುವಕರು ಇದರ ಹಿಂದೆ ನಿಂತು ಕೆಲಸ ಮಾಡುತ್ತಿದ್ದಾರೆ.
ಬಡವರಿಗೆ ಉಚಿತವಾಗಿ ಇಡ್ಲಿ ನೀಡುವ 'ರಾಣಿ' ಮಾನವೀಯತೆ!
ಉಡುಪಿಯ ಸಾಯಿಬ್ರಕಟ್ಟೆಯ ಸಿಂಚನಾಗೆ ಈಗಿನ್ನೂ ಹದಿನೈದರ ಹರೆಯ. ಆದರೆ ಆಕೆಯ ಕಿಡ್ನಿಯಲ್ಲಿ ತೊಂದರೆ ಉಂಟಾಗಿದ್ದು, ಬೇರೆ ಕಿಡ್ನಿ ಕಸಿಯ ಅವಶ್ಯಕತೆ ಇದೆ. ಬಡವರ ಮನೆಯ ಈ ಬಾಲಕಿಗೆ ಲಕ್ಷಾಂತರ ರೂ ಖರ್ಚು ಮಾಡಿ ಚಿಕಿತ್ಸೆ ನೀಡುವುದು ಕಷ್ಟದ ಮಾತೇ ಸರಿ. ಇದನ್ನು ಅರಿತ ಉಡುಪಿಯ ಯುವ ಟೈಗರ್ಸ್ ತಂಡ ಯುವಕನೊಬ್ಬನಿಗೆ ವಿಶಿಷ್ಟ ವೇಷವೊಂದನ್ನು ಹಾಕಿಸಿ ಬಾಲಕಿಗಾಗಿ ಧನ ಸಹಾಯ ಯಾಚಿಸುತ್ತಿದೆ.
ತನ್ನ ಕಿಡ್ನಿ ಮಾರಲು ಹೋಗಿ ಮೋಸ: ಮಹಿಳೆ ಆತ್ಮಹತ್ಯೆ
ಕರಾವಳಿಯಲ್ಲಿ ಶಾರದಾ ಉತ್ಸವದ ಸಡಗರವೂ ಇರುವುದರಿಂದ ಜನ ಸಂದಣಿ ಇರುವ ಕಡೆಗಳಲ್ಲಿ ಮತ್ತು ವಾಹನ ಸವಾರರಲ್ಲಿ ಈ ತಂಡ ಧನ ಸಹಾಯ ಕೇಳುತ್ತಿದೆ. ಸಹೃದಯರು ಯುವಕರ ಮನವಿಗೆ ಸ್ಪಂದಿಸಿ ಕೈಲಾದ ಧನ ಸಹಾಯ ಮಾಡುತ್ತಿದ್ದಾರೆ. ಈ ತಂಡ ಉಡುಪಿಯಿಂದ ಮಂಗಳೂರು ತನಕವೂ ಸಂಚರಿಸಿ ಹಣ ಸಂಗ್ರಹ ಮಾಡಿ ಸಿಂಚನಾ ಚಿಕಿತ್ಸೆಗೆ ನೀಡಲಿದೆ.