ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ಪರಿಸರ ದಿನದಂದೇ ಮರಗಳ ಹನನ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜೂನ್ 06: ವಿಶ್ವ ಪರಿಸರ ದಿನದಂದೇ ಮರಗಳನ್ನು ಕಡಿದು ಹಾಕಿದ ಘಟನೆ ಉಡುಪಿಯಲ್ಲಿ ನಡೆದಿದೆ. ನಿನ್ನೆ ಪರಿಸರ ದಿನಕ್ಕಾಗಿ ಎಲ್ಲೆಡೆ ಗಿಡ ನೆಡುತ್ತಿದ್ದರೆ, ಇಲ್ಲಿ ಮಾತ್ರ ಬೆಳೆದು ನಿಂತ ಹತ್ತಾರು ಮರಗಳನ್ನು ಕಡಿದುರುಳಿಸಿದ್ದು ನಗರದ ನಾಗರೀಕರ ಅಸಮಾಧಾನಕ್ಕೆ ಕಾರಣವಾಗಿದೆ.

Recommended Video

ಬದಲಾಯಿಸಲು ಯಾರೆಲ್ಲಾ ಸ್ಟಾರ್ ಗಳು ಬಂದಿದ್ದಾರೆ ನೋಡಿ | Badalagu Neenu Badalayisu Neenu | Oneindia Kannada

ಉಡುಪಿ ನಗರದ ಸರಕಾರಿ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಅಡ್ಡವಾಗಿದೆ ಎಂಬ ನೆಪವೊಡ್ಡಿ ಮರಗಳ ಹನನ ನಡೆದಿದೆ. ಈ ಮೊದಲು ಮರಗಳನ್ನು ಬೇರೆ ಕಡೆ ಶಿಫ್ಟ್ ಮಾಡುತ್ತೇವೆ ಎಂದು ಅರಣ್ಯ ಸಚಿವರು ಭರವಸೆ ಕೊಟ್ಟು ಹೋಗಿದ್ದರು. ಆದರೆ ನಿನ್ನೆ ಮರ ಕತ್ತರಿಸುವ ಕೆಲಸಕ್ಕೆ ಯಾರೂ ಅಡ್ಡಿಪಡಿಸದಂತೆ ಗೇಟಿಗೆ ಬೀಗ ಜಡಿದು ಕಾರ್ಯಾಚರಣೆ ನಡೆಸಿ ಮರಗಳನ್ನು ಕಡಿಯಲಾಗಿದೆ.

ಪರಿಸರ ಸಂರಕ್ಷಣೆಗೆ ಹೋರಾಡುವ ಪುಟ್ಟ ಯೋಧರ ವಿಶೇಷ ವರದಿ ಪರಿಸರ ಸಂರಕ್ಷಣೆಗೆ ಹೋರಾಡುವ ಪುಟ್ಟ ಯೋಧರ ವಿಶೇಷ ವರದಿ

Forest Department Cut Large Trees On World Environment Day In Udupi

30 ವರ್ಷ ಹಳೆಯದಾದ ಸುಮಾರು 12 ಬೃಹತ್ ಮರಗಳನ್ನು ಅರಣ್ಯ ಇಲಾಖೆ ಕಡಿದಿದ್ದಾರೆ. ಮಾತ್ರವಲ್ಲ, ಪರಿಸರ ದಿನಾಚರಣೆಯ ದಿನವೇ ಅರಣ್ಯ ಇಲಾಖೆಯಿಂದ ಇಲಾಖೆಯ ಉದ್ದೇಶವನ್ನೇ ಅಣಕಿಸುವ ರೀತಿ ಈ ಕೆಲಸ ನಡೆದಿದ್ದಕ್ಕೆ ಇದರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
forest department in udupi has cut large trees on world environment day itself. People outraged against it,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X