ಕಾರ್ಕಳದ ಬಾಕ್ಸ್ ತಯಾರಿಕಾ ಘಟಕದಲ್ಲಿ ಬೆಂಕಿ; ಲಕ್ಷಾಂತರ ರೂ.ನಷ್ಟ
ಉಡುಪಿ, ಜುಲೈ 10: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರಿನಲ್ಲಿ ಅಗ್ನಿ ಆಕಸ್ಮಿಕದಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಇಲ್ಲಿನ ಪ್ರಭಾಕರ ಶೆಣೈ ಎಂಬುವರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.
Recommended Video
Asia
cup
postponed
till
june
2021
|
Oneindia
Kannada
ಪ್ರಭಾಕರ ಶೆಣೈ ಎಂಬುವರ ಮನೆಯ ಮೇಲೆ ಬಾಕ್ಸ್ ತಯಾರಿಕಾ ಘಟಕವಿದ್ದು, ಈ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಈ ಅವಘಡ ಸಂಭವಿಸಿದೆ. ಚಿನ್ನಾಭರಣ ಪ್ಯಾಕ್ ಮಾಡುವ ಬಾಕ್ಸ್ ತಯಾರಿಸುವ ಘಟಕ ಇದಾಗಿದೆ.
ಮೈಸೂರಿನ ಪ್ರತಿಷ್ಠಿತ ಔಷಧ ಮಳಿಗೆಯಲ್ಲಿ ಬೆಂಕಿ
ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿದೆ. ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಈಗಾಗಲೇ ಲಕ್ಷಾಂತರ ರೂ. ಮೌಲ್ಯದ ಸ್ವತ್ತುಗಳು ಬೆಂಕಿಗಾಹುತಿಯಾಗಿವೆ. ಕಾರ್ಯಾಚರಣೆ ಮುಂದುವರೆದಿದೆ.
Comments
English summary
Fire broke out at Mundkur Karkala box preparing unit caused millions of rupees loss