ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಮೋದಿ' ಭಾವಚಿತ್ರವಿರುವ ಸೀರೆ ಮಾರಾಟ:ಉಡುಪಿ ಜವಳಿ ಅಂಗಡಿ ಮೇಲೆ ಚುನಾವಣಾ ಆಯೋಗ ದಾಳಿ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಏಪ್ರಿಲ್ 03:ಉಡುಪಿಯ ಉದ್ಯಾವರದಲ್ಲಿರುವ ಜಯಲಕ್ಷ್ಮಿ ಜವಳಿ ಅಂಗಡಿ ಮೇಲೆ ಚುನಾವಣಾ ಆಯೋಗ ದಾಳಿ ನಡೆಸಿದೆ. ನೀತಿ ಸಂಹಿತೆ ಉಲ್ಲಂಘಿಸಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವಿರುವ ಸೀರೆ ಮಾರುತ್ತಿದ್ದ ಹಿನ್ನಲೆಯಲ್ಲಿ ಚುನಾವಣಾ ಆಯೋಗ ದಾಳಿ ಮಾಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಚುನಾವಣಾ ಆಯೋಗದ ಸಿಬ್ಬಂದಿ ದಾಳಿ ಸಂದರ್ಭದಲ್ಲಿ ನರೇಂದ್ರ ಮೋದಿ ಚಿತ್ರವಿರುವ ಎರಡು ಸೀರೆ ವಶಪಡಿಸಿಕೊಂಡಿದೆ. ಎಚ್ಚರಿಕೆಯ ಹೊರತಾಗಿಯೂ ಜಯಲಕ್ಷ್ಮಿ ಜವಳಿ ಅಂಗಡಿಯಲ್ಲಿ ಬಾಲಕೋಟ್ ಮತ್ತು ನರೇಂದ್ರ ಮೋದಿ ಭಾವಚಿತ್ರವಿರುವ ಸೀರೆ ಮಾರುತ್ತಿದ್ದರು ಎನ್ನಲಾಗಿದೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Election Commission raided Jayalakshmi textile shop in Udyavara

ಜಯಲಕ್ಷ್ಮಿ ಜವಳಿ ಅಂಗಡಿ ಉಡುಪಿಯ ಉದ್ಯಾವರದಲ್ಲಿರುವ ಜನಪ್ರಿಯ ಮಳಿಗೆಯಾಗಿದ್ದು, ಇಲ್ಲಿ ಮೋದಿ ಭಾವಚಿತ್ರವಿರುವ ಸೀರೆ ಮಾರಾಟ ಕುರಿತು ಈ ಮೊದಲೇ ಆಯೋಗಕ್ಕೆ ಮಾಹಿತಿ ದೊರೆತಿತ್ತು. ಆಗ ಆಯೋಗ ಎಚ್ಚರಿಕೆ ಕೊಟ್ಟಿದೆ. ಆದರೂ ಮಾಲೀಕರು ಸೀರೆಗಳನ್ನು ಮಾರಾಟ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ (ಏಪ್ರಿಲ್.02) ದಾಳಿ ನಡೆಸಲಾಗಿದೆ.

Election Commission raided Jayalakshmi textile shop in Udyavara
English summary
Election Commission raided Jayalakshmi textile shop in Udyavara at Udupi.Here is selling Narendra modi portrait saree.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X