ಆಷಾಢ ಏಕಾದಶಿ, ಉಡುಪಿ ಶ್ರೀಕೃಷ್ಣ ಮಠದಲ್ಲಿ ಮುದ್ರಾಧರಣೆ
ಉಡುಪಿ, ಜುಲೈ 04 : ಆಷಾಢ ತಿಂಗಳ ಮೊದಲ ಏಕಾದಶಿಯ ದಿನವಾದ ಇಂದು (ಜುಲೈ 4) ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಮುದ್ರಾಧರಣೆ ನೆರವೇರಿತ್ತು.
ಸುದರ್ಶನ ಹೋಮದಲ್ಲಿ ಭಗವಂತನ ಆಯುಧಗಳಾದ ಚಕ್ರ, ಶಂಖಗಳನ್ನು ಕಾಯಿಸಿ ಬಾಹುಮೂಲದಲ್ಲಿ ಧಾರಣೆ ಮಾಡುವ ಧಾರ್ಮಿಕ ಪ್ರಕ್ರಿಯೆ ತಪ್ತ ಮುದ್ರಾಧಾರಣೆ ಇಂದು ಶ್ರೀಕೃಷ್ಣ ಮಠದಲ್ಲಿ ನೆರವೇರಿತ್ತು.
ಬಸವನಗುಡಿಯ ಉತ್ತರಾಧಿಮಠದಲ್ಲಿ ತಪ್ತ ಮುದ್ರಾಧಾರಣೆ
ಆಷಾಢ ಶುದ್ಧ ಶಯನೀ ಏಕಾದಶಿಯಂದು ಭಗವಂತ ಯೋಗನಿದ್ರೆಗೆ ಮುಂದಾದರೆ, ದ್ವಾದಶಿಯಂದು (ಜು.5) ಚಾತುರ್ಮಾಸ್ಯ ವ್ರತ ಆರಂಭವಾಗಿ (ಶಾಖಾ, ದಧಿ, ಕ್ಷೀರ ಹಾಗೂ ದ್ವಿದಳ) ಅ. 30ಕ್ಕೆ ಕೊನೆಗೊಳ್ಳಲಿದೆ.
ವೇದದಲ್ಲಿ ಅತಪ್ತತನು: ತದಾಮಹ ಅಷ್ಣುತೇ ಭಗವಂತನ ಆಯುಧಗಳಾದ ಚಕ್ರ, ಶಂಖಗಳಿಂದ ಮುದ್ರಾಧಾರಣೆ ಮಾಡಿಸಿಕೊಂಡ ಸಾಧಕನು ಪವಿತ್ರಾತ್ಮನಾಗಿ ಮೋಕ್ಷ ಫಲ ಪಡೆಯುತ್ತಾನೆ ಎನ್ನುವ ಉಲ್ಲೇಖವಿದೆ ಎನ್ನುತ್ತಾರೆ ಶ್ರೀಕೃಷ್ಣ ಮಠದ ಪರಪತ್ಯಗಾರ ಕೆ.ಆರ್. ಶಶಾಂಕ್ ಭಟ್.
ಮಳೆಗಾಲ ಆರಂಭವಾಯಿತೆಂದರೆ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಯತಿಗಳಿಗೆ ಸಂಚಾರ ನಿಷಿದ್ಧ. ಹೀಗಾಗಿ ಒಂದೆಡೆ ಒಟ್ಟಾಗಿ ಕೂತು ಚಾತುರ್ಮಾಸ್ಯ ವ್ರತದಲ್ಲಿ ತೊಡಗುತ್ತಾರೆ.
ಅಹಿಂಸೆ ತತ್ವದ ಹಿನ್ನಲೆ, ಹಿಂದಿನ ಕಾಲಗಳಲ್ಲಿ ಮಳೆಗಾಲದಲ್ಲಿ ರೋಗ ತಡೆಯೊಂದಿಗೆ ರೋಗ ನಿರೋಧಕ ಶಕ್ತಿ ತಪ್ತ ಮುದ್ರಾಧಾರಣೆ ಪೂರಕ ಎನ್ನುವುದು ಆಧುನಿಕ ನಂಬಿಕೆಯಾಗಿದೆ.
ಬಲಗೈಗೆ ಚಕ್ರ ಹಾಗೂ ಶಂಖ ಮುದ್ರೆ ಧಾರಣೆ ಮಾಡಿಸಿಕೊಳ್ಳುವುದು ಶಾಸ್ತ್ರೀಯ ಕ್ರಮ. ಇನ್ನು ಹೊಟ್ಟೆಗೆ ಚಕ್ರ, ಬಲ ಎದೆಗೆ ಚಕ್ರ, ಎಡ ಎದೆಗೆ ಶಂಖ ಮುದ್ರೆ ಹಾಕಿಸಿಕೊಳ್ಳಬಹುದಾಗಿದ್ದರು ಇದು ಶಾಸ್ತ್ರಿಯವಲ್ಲ. ಮಣಿಪಾಲ ವಿದ್ಯಾರ್ಥಿಗಳಿಗೂ ತಪ್ತ ಮುದ್ರಾಧಾರಣೆ ಬಗ್ಗೆ ವೈಜ್ಞಾನಿಕ ಕುತೂಹಲವಿದೆ ಎನ್ನುತ್ತಾರೆ ಶ್ರೀಕೃಷ್ಣ ಮಠದ ಪರಪತ್ಯಗಾರ ಕೆ.ಆರ್. ಶಶಾಂಕ್ ಭಟ್.
ಚಾತುರ್ಮಾಸ್ಯ
ವ್ರತ
ದಿನಾಂಕಗಳು:
ಶಾಖ
ವ್ರತ
-
ಜುಲೈ
5ರಿಂದ
ಆಗಸ್ಟ್
3ರ
ತನಕ
ದಧಿ
ವ್ರತ
-
ಆಗಸ್ಟ್
4ರಿಂದ
ಸೆಪ್ಟೆಂಬರ್.1ರ
ತನಕ
ಕ್ಷೀರ
ವ್ರತ-
ಅಕ್ಟೋಬರ್
2ರಿಂದ
ಅಕ್ಟೋಬರ್30ರ
ತನಕ
ದ್ವಿದಳ
ವ್ರತ
-
ಅಕ್ಟೋಬರ್.2ರಿಂದ
ಅ.30ತನಕ