ಉಡುಪಿಯಲ್ಲಿ ದಲಿತ ಯುವತಿಗೆ ಗರ್ಭಪಾತ: ಆರೋಪಿ ಬಂಧನಕ್ಕೆ ಆಗ್ರಹ
ಉಡುಪಿ, ಜೂನ್ 13: ದಲಿತ ಯುವತಿಯನ್ನು ಮುದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಎಸಗಿದ ಬಳಿಕ ಗರ್ಭಪಾತ ಮಾಡಿಸಿದ ಆರೋಪಿಯನ್ನು ತಕ್ಷಣವೇ ಬಂಧಿಸಬೆಕು ಎಂದು ಅಂಬೆಡ್ಕರ್ ಯುವ ಸೇನೆ ಆಗ್ರಹಿಸಿದೆ.
ಉಡುಪಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ ಅಂಬೇಡ್ಕರ್ ಯುವಸೇನೆ, ಆರೋಪಿಯ ವಿರುದ್ಧ ದೂರು ದಾಖಲಿಸಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ.ಇನ್ನೊಂದು ವಾರದೊಳಗೆ ಆರೋಪಿಯನ್ನು ಬಂಧಿಸದಿದ್ದರೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಉಡುಪಿಯಲ್ಲಿ ಸದ್ಯಕ್ಕಂತೂ ಕೃಷ್ಣನ ದರ್ಶನ ಇಲ್ಲ...
ಉಡುಪಿಯ ತೊಟ್ಟಂನ ದಲಿತ ಯುವತಿಗೆ ಪರಿಚಯವಾದ ಕರಂಬಳ್ಳಿಯ ಅಕ್ಷಯ್ ಶೆಟ್ಟಿ, ಯುವತಿಯ ಸ್ನೇಹವನ್ನು ದುರುಪಯೋಗಪಡಿಸಿಕೊಂಡು ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿದ್ದಾನೆ. ನಂತರ ಯುವತಿ ಎಚ್ಚರಗೊಂಡಾಗ ನಾನು ನಿನ್ನನ್ನೇ ಮದುವೆಯಾಗುತ್ತೇನೆ. ಮೊಸ ಮಾಡುವುದಿಲ್ಲ ಎಂದು ನಂಬಿಸಿದ್ದಾನೆ.
ನವೆಂಬರ್ 11 ರಂದು ಆಕೆಯನ್ನು ಉಡುಪಿಯ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಿದಾಗ ಯುವತಿ ಗರ್ಭವತಿ ಎಂದು ತಿಳಿದು ಆಕೆಗೆ ಗರ್ಭಪಾತ ಮಾಡಿಸಿದ್ದನು. ಯುವತಿ ಮದುವೆಗೆ ಒತ್ತಾಯಿಸಿದಾಗ ಅಕ್ಷಯ್ ಆಕೆಯ ಮನೆಗೆ ಬಂದು ಯುವತಿಗೆ ಹಾಗೂ ಆಕೆಯ ಚಿಕ್ಕಮ್ಮನಿಗೆ ಜೀವ ಬೆದರಿಕೆ ಹಾಕಿದ್ದಾನೆ.
ಈ ಕುರಿತಾಗಿ ಉಡುಪಿ ಮಹಿಳಾ ಠಾಣೆಯಲ್ಲಿ ಮೇ 5 ರಂದು ದೂರು ದಾಖಲಾಗಿದ್ದು, ಇದುವರೆಗೂ ಆರೋಪಿಯ ಬಂಧನವಾಗಿಲ್ಲ ಎಂದು ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷರಾದ ಜಯನ್ ಮಲ್ಪೆ ತಿಳಿಸಿದ್ದಾರೆ.