ಆಸ್ಪತ್ರೆಯಲ್ಲಿ ಹಾಸಿಗೆಗಳು ಖಾಲಿಯಾಗಿಯೇ ಇರಲಿ; ಹಾರೈಸಿದ ಉಡುಪಿ ಡಿಸಿ
ಉಡುಪಿ, ನವೆಂಬರ್ 6: ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಇಳಿಮುಖವಾಗುತ್ತಿರುವುದಕ್ಕೆ ಜಿಲ್ಲಾಧಿಕಾರಿ ಜಿ ಜಗದೀಶ್ ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶುಕ್ರವಾರ ಮಾತನಾಡಿದ ಅವರು, "ರಾಜ್ಯದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭಿಕ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ವಿಪರೀತ ಏರಿತ್ತು. ದಿನಕ್ಕೆ ನೂರರ ಲೆಕ್ಕದಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದರು. ನೂರು ಜನರಲ್ಲಿ ಮೂವತ್ತು ಮಂದಿಗೆ ಕೊರೊನಾ ದೃಢಪಡುತ್ತಿತ್ತು. ಆದರೆ ಈಗ ಸೋಂಕಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ" ಎಂದು ಸಂತಸಗೊಂಡರು. ಇದೇ ಸಮಯದಲ್ಲಿ ಜನರಿಗೆ ಎಚ್ಚರಿಕೆಯನ್ನೂ ನೀಡಿದರು.
ಉಡುಪಿ; ಕೋವಿಡ್ ಲಸಿಕೆ ಸಂಗ್ರಹಕ್ಕೆ ಸಿದ್ಧವಾಗಿದೆ ವಿಶೇಷ ಕೊಠಡಿ
"ಎಲ್ಲರ ಸಹಕಾರವೂ ಮುಖ್ಯ"
ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇಳಿಯಲು ಆರೋಗ್ಯ ಇಲಾಖೆ, ಆರೋಗ್ಯ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಂದ ದೊರೆತ ಸಹಕಾರವೇ ಕಾರಣ ಎಂದು ಜಿಲ್ಲಾಧಿಕಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದಕ್ಕೆ, ಸೂಕ್ತ ಚಿಕಿತ್ಸೆ ದೊರೆತ ಕಾರಣದಿಂದ ಸೋಂಕಿನ ಪ್ರಮಾಣ ಇಳಿದಿದೆ ಎಂದು ಹೇಳಿದರು.
ಸಮಾರಂಭಗಳ ಮೇಲೆ ನಿಗಾ ಇಡಲು ಅಧಿಕಾರಿ ನೇಮಕ
ಜಿಲ್ಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಿಂತೆ ಸಭೆ, ಸಮಾರಂಭಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದರೂ ಕೆಲವು ಕಡೆ ನಿಯಮಗಳನ್ನು ಗಾಳಿಗೆ ತೂರಿ ವಿವಾಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಹೆಚ್ಚು ಜನರು ಸೇರುತ್ತಿದ್ದಾರೆ. ಆದ್ದರಿಂದ ಕಾರ್ಯಕ್ರಮಗಳಿಗೆ ಅನುಮತಿ ಪಡೆಯುವ ವೇಳೆ ತಹಶೀಲ್ದಾರರಿಗೆ ಓರ್ವ ಅಧಿಕಾರಿಯನ್ನು ನೇಮಿಸಿ ಕಾರ್ಯಕ್ರಮದ ಮೇಲೆ ನಿಗಾ ಇಡಲು ಸೂಚಿಸಲಾಗಿದೆ ಎಂದು ತಿಳಿಸದರು.
ಉಡುಪಿ: ಯೋಧರಿಗೆ ಮಾಸ್ಕ್ ಹೊಲಿದು ಕೊಟ್ಟ ಪುಟಾಣಿ ಕೊರೊನಾ ವಾರಿಯರ್
ಕ್ರಿಮಿನಲ್ ಕೇಸ್ ಹಾಕಲು ಸೂಚನೆ
ಕೋವಿಡ್ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚಿಸಲಾಗಿದೆ. ಈ ಬಗ್ಗೆ ನಿಗಾ ವಹಿಸಲು ನೇಮಕಗೊಂಡ ಅಧಿಕಾರಿ ತನ್ನ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲರಾದರೆ, ಆ ಅಧಿಕಾರಿ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದರು.
"ಹಾಸಿಗೆಗಳು ಖಾಲಿಯಾಗಿಯೇ ಇರಲಿ"
ಜಿಲ್ಲೆಯ
ಆಸ್ಪತ್ರೆಗಳಲ್ಲಿ
ಹಾಸಿಗೆಗಳು
ಖಾಲಿಯಾಗಿವೆ.
ಈ
ಹಾಸಿಗೆಗಳು
ಖಾಲಿಯಾಗಿಯೇ
ಇರಲಿ.
ಜನರು
ತಮ್ಮ
ತಪ್ಪುಗಳಿಂದ
ಮತ್ತೆ
ಈ
ಹಾಸಿಗೆಯನ್ನು
ಭರ್ತಿ
ಮಾಡದಂತೆ
ಜಾಗರೂಕರಾಗಿರಿ"
ಎಂದು
ಎಚ್ಚರಿಕೆ
ನೀಡಿದರು.
ನವೆಂಬರ್
5ರ
ವರದಿಯಂತೆ
ಉಡುಪಿ
ಜಿಲ್ಲೆಯಲ್ಲಿ
ಒಟ್ಟು
22067
ಕೊರೊನಾ
ಪ್ರಕರಣಗಳು
ದಾಖಲಾಗಿದ್ದು,
ಇದರಲ್ಲಿ
ಈಗಾಗಲೇ
21468
ಮಂದಿ
ಗುಣಮುಖರಾಗಿ
ಬಿಡುಗಡೆಯಾಗಿದ್ದಾರೆ.
414
ಸಕ್ರಿಯ
ಪ್ರಕರಣಗಳಿದ್ದು,
ಇದುವರೆಗೂ
185
ಮಂದಿ
ಕೊರೊನಾದಿಂದ
ಸಾವನ್ನಪ್ಪಿದ್ದಾರೆ.
Recommended Video