ಕೊಲ್ಲೂರಿನಲ್ಲಿ ಶ್ರೀಶಾಂತ್ ಮನದಾಸೆ ಬಹಿರಂಗ
ಕುಂದಾಪುರ, ಆ.24: ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಶ್ರೀಶಾಂತ್ ಅವರು ಕುಟುಂಬ ಸಮೇತ ಕುಂದಾಪುರ ತಾಲೂಕಿನ ಶ್ರೀಕ್ಷೇತ್ರ ಕೊಲ್ಲೂರು ಮುಕಾಂಬಿಕಾ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಈ ನಡುವೆ ಕ್ರಿಕೆಟ್, ಸಿನಿಮಾ, ಡ್ಯಾನ್ಸ್ ಬಗ್ಗೆ ಶ್ರೀಶಾಂತ್ ತಮ್ಮ ಮನದಾಸೆಯನ್ನು ಬಹಿರಂಗಪಡಿಸಿದ್ದಾರೆ. ಮದುವೆಯಾದ ನಂತರ ಮೊದಲ ಬಾರಿಗೆ ಪತ್ನಿ ಸಮೇತರಾಗಿ ಕೊಲ್ಲೂರಿಗೆ ಶ್ರೀಶಾಂತ್ ಆಗಮಿಸಿದ್ದಾರೆ.
ಶನಿವಾರ ಕುಟುಂಬ ಸಮೇತರಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿದ ಶಾಂತಕುಮಾರನ್ ಶ್ರೀಶಾಂತ್ ಅವರು ಮುಕಾಂಬಿಕೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನವ ಚಂಡಿಕಾ ಹೋಮದಲ್ಲಿ ಪಾಲ್ಗೊಂಡಿರುವ ಅವರ ಕುಟುಂಬ ರವಿವಾರ ಪೂರ್ಣಾಹುತಿ ಅರ್ಪಿಸಲಿದೆ.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್. ಮಾರುತಿ ಉಪ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಅವರು ಶ್ರೀಶಾಂತ್ ಅವರನ್ನು ಸ್ವಾಗತಿಸಿ ಗೌರವಿಸಿದರು. ಶ್ರೀಶಾಂತ್ ಅವರ ಜೊತೆ ಸೋದರರಾದ ಅಭಿಷೇಕ್, ಸರ್ವೇಶ್, ಪೋಷಕರು ಹಾಗೂ ಬಂಧು ಮಿತ್ರರು ದೇಗುಲದಲ್ಲಿ ಕಂಡು ಬಂದರು.
ವೃತ್ತಿ
ಜೀವನದ
ಬಗ್ಗೆ
ಶ್ರೀಶಾಂತ್
:
ಕ್ರಿಕೆಟ್
ಎಂದಿದ್ದರೂ
ನನ್ನ
ವೃತ್ತಿ.
ಸಿನಿಮಾ,
ಡ್ಯಾನ್ಸ್
ಎಲ್ಲವೂ
ನನ್ನ
ಪ್ರವೃತ್ತಿಗಳು.
ಹವ್ಯಾಸಕ್ಕಾಗಿ
ಆರಿಸಿಕೊಂಡಿರುವ
ಕ್ಷೇತ್ರಗಳು
ಎಂದಿದ್ದಾರೆ.
ಸ್ಪಾಟ್
ಫಿಕ್ಸಿಂಗ್
ಪ್ರಕರಣ
ಇನ್ನೂ
ಕೋರ್ಟಿನಲ್ಲಿ
ವಿಚಾರಣೆ
ಹಂತದಲ್ಲಿದೆ.
ಸೆ.27ಕ್ಕೆ
ವಿಚಾರಣೆ
ಇದೆ.
ಹೀಗಾಗಿ
ನಾನು
ಆ
ಬಗ್ಗೆ
ಹೆಚ್ಚಿಗೆ
ಮಾತನಾಡಲು
ಬಯಸುವುದಿಲ್ಲ.
2015ರ
ವಿಶ್ವಕಪ್
ವೇಳೆಗೆ
ಟೀಂ
ಇಂಡಿಯಾ
ಸೇರುವ
ವಿಶ್ವಾಸವಿದೆ
ಎಂದರು.
ಆದರೆ, ಸಿನಿಮಾ ಹುಚ್ಚು ಶ್ರೀಶಾಂತ್ ಗೆ ಕ್ರಿಕೆಟ್ ಗಿಂತ ಹೆಚ್ಚಿನ ಕಿಕ್ ನೀಡುತ್ತಿದೆ ಎಂದು ಆಪ್ತ ವಲಯ ಹೇಳಿದೆ. ಈಗಾಗಲೇ ಡ್ಯಾನ್ಸಿಂಗ್ ಹುಚ್ಚು ಹತ್ತಿಸಿಕೊಂಡು ರಿಯಾಲಿಟಿ ಶೋಗಳಲ್ಲೂ ಕುಣಿದಾಡಿದ್ದ ಶ್ರೀಶಾಂತ್ ಈಗ ದೇಹ ದಂಡಿಸಿ ಸಿಕ್ಸ್ ಪ್ಯಾಕ್ ಅಬ್ಸ್ ಬೆಳೆಸಿಕೊಂಡಿದ್ದಾರೆ. ಹೊಸ ಲುಕ್ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿರುವ ಶ್ರೀಶಾಂತ್ ಬೆಳ್ಳಿತೆರೆಗೆ ಎಂಟ್ರಿ ಕೊಡಲು ಸಿದ್ದರಾಗಿದ್ದಾರೆ.
ಟಿವಿ ಕಾರ್ಯಕ್ರಮ ಸಿನಿಮಾ ಆಧಾರಿತ ಶೋಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಶ್ರೀಶಾಂತ್ ಗೆ ಈಗ ಟಾಲಿವುಡ್ ಗೆ ಎಂಟ್ರಿ ಕೊಡುವುದು ಖಚಿತವಾಗಿದೆ. ಯಶಸ್ವಿ ನಿರ್ದೇಶಕ ಪೂರಿ ಜಗನ್ನಾಥ್ ಅವರ ಹೊಸ ಚಿತ್ರಕ್ಕೆ ಶ್ರೀಶಾಂತ್ ಸಹಿ ಹಾಕಿದ್ದಾರೆ. ಇದರಲ್ಲಿ ಕ್ರಿಕೆಟರ್ ಹಾಗೂ ಮತ್ತೊಂದು ಪಾತ್ರದಲ್ಲಿ ಶ್ರೀಶಾಂತ್ ಕಾಣಿಸಿಕೊಳ್ಳಲಿದ್ದಾರಂತೆ. ಇದರ ಜೊತೆಗೆ ಮಲೆಯಾಳಿ ನಿರ್ದೇಶಕರೊಬ್ಬರ ಹಿಂದಿ ಚಿತ್ರದಲ್ಲೂ ನಟಿಸುವಂತೆ ಆಫರ್ ಬಂದಿದೆಯಂತೆ. ಕಾಲಿವುಡ್ ಗೂ ಶ್ರೀಶಾಂತ್ ಗೆ ಆಹ್ವಾನ ನೀಡಿದೆ. ಒಟ್ಟಾರೆ ಮತ್ತೊಮ್ಮೆ ಕ್ರಿಕೆಟ್ ಫೀಲ್ಡ್ ಗೆ ರೀ ಎಂಟ್ರಿ ಕೊಡಲು ಸಿದ್ಧವಾಗಿರುವ ಶ್ರೀಶಾಂತ್ ಗೆ ಒಂದರ ಮೇಲೊಂದು ಸಿನಿಮಾ ಆಫರ್ ಗಳು ಬರುತ್ತಿವೆ. ಯಾವ ಫೀಲ್ಡ್ ನಲ್ಲಿ ಯಾವ ಸ್ವಿಂಗ್ ಬೌಲಿಂಗ್ ಮಾಡುತ್ತಾರೋ ಕಾದುನೋಡಬೇಕಿದೆ.