ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ಸಮಾಜ ಸೇವಕನಿಂದ ಬಡವರಿಗೆ ಉಪಾಹಾರ ವಿತರಣೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮಾರ್ಚ್ 30: ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ ಅವರು ಇಂದು ಬೆಳಿಗ್ಗೆ 150 ಕ್ಕೂ ಅಧಿಕ ಬಡವರಿಗೆ, ಅಶಕ್ತರಿಗೆ ಚಹಾ-ತಿಂಡಿ ವಿತರಿಸಿದರು.

Recommended Video

ಕೊರೊನಾ ಬಂದಮೇಲೆ ಕುಟುಂಬದಲ್ಲಿ ಆಗಿರೋ ಬದಲಾವಣೆಗಳೇನು? | Changes in Family | Wife | Oneindia kannada

ಮನೆ ಇಲ್ಲದೆ ಬೀದಿ ಬದಿಯಲ್ಲಿ ಜೀವಿಸುತ್ತಿರುವ ವಲಸೆ ಕಾರ್ಮಿಕರು ಮತ್ತು ಕೆಲವು ನಿರ್ಗತಿಕರಿಗೆ ಕಳೆದ ಐದಾರು ದಿನಗಳಿಂದ ಎರಡು ಹೊತ್ತು ಊಟ ಮತ್ತು ಚಹಾ ವಿತರಿಸುವ ಕೆಲಸವನ್ನು ವಿಶು ಶೆಟ್ಟಿ ಅವರು ಮಾಡುತ್ತಿದ್ದಾರೆ.

ಉಪಾಹಾರವನ್ನು ವಿತರಿಸುವ ಸಂದರ್ಭದಲ್ಲಿ ಮೂರು ಮೀಟರ್ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ವೆಲ್ಡಿಂಗ್ ಶಾಪ್ ನಡೆಸುತ್ತಿರುವ ವಿಶು ಶೆಟ್ಟಿ ಅವರು ತಮ್ಮ ದುಡಿಮೆಯ ಬಹುಪಾಲನ್ನು ಸಮಾಜ ಸೇವೆಗೆ ವ್ಯಯಿಸುತ್ತಿದ್ದಾರೆ.

Distribution Food For Poor People By Social Worker In Udupi

ಕೊರೊನಾ ಎಮರ್ಜೆನ್ಸಿ ಘೋಷಣೆಯಾದ ಮರುದಿನದಿಂದಲೇ ವಿಶು ಶೆಟ್ಟಿ ಅವರು ಬಡವರ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಇವರು ಆಹಾರ ವಿತರಿಸಲು ಆರಂಭಿಸಿದ ಬಳಿಕ ಉಡುಪಿಯ ಇತರ ಸಮಾಜಪರ ಸಂಘಟನೆಗಳು ಆಹಾರ ವಿತರಿಸುವ ಯೋಜನೆ ಕೈಗೆತ್ತಿಕೊಂಡಿವೆ.

English summary
Udupi social worker Vishu Shetty distributed tea and snacks to more than 150 poor and disabled people this morning In Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X