ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಯ ನಾಗಾರಾಧನೆ ಮೇಲೆ ಕೊರೊನಾ ಕರಿಛಾಯೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ 25: ನಾಗಾರಾಧನೆಗೆ ನಮ್ಮ ನಾಡಿನಲ್ಲೇ ಪ್ರಸಿದ್ಧವಾಗಿರುವ ಸ್ಥಳ ಕರಾವಳಿ ಜಿಲ್ಲೆಗಳು. ಆದರೆ ಈ ವರ್ಷ ಮಾತ್ರ ಕೊರೊನಾ ಕರಿಛಾಯೆ ನಾಗರಪಂಚಮಿಯ ಸಂಭ್ರಮಕ್ಕೆ ತಣ್ಣೀರೆರಚಿದೆ.

Recommended Video

America ಜೊತೆ ಸೇಡು ತೀರಿಸಿಕೊಂಡ China | Oneindia Kannada

ನಾಗರ ಪಂಚಮಿಯ ದಿನದಂದು ಕರಾವಳಿಯ ಎಲ್ಲಾ ಜನರು ತಮ್ಮ ಕುಟುಂಬದ ನಾಗನ ಮೂಲ ಬನಕ್ಕೆ ತೆರಳಿ ತನು ಸೇವೆ ಅರ್ಪಿಸುತ್ತಾರೆ. ಆದರೆ ಈ ವರ್ಷ ಕೊರೊನಾ ಸಾರ್ವಜನಿಕ ನಾಗರ ಪಂಚಮಿ ಆಚರಣೆಗೆ ಅವಕಾಶವನ್ನು ನೀಡಿಲ್ಲ.

ನಾಗರಪಂಚಮಿಯಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಬಂದ್ನಾಗರಪಂಚಮಿಯಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಬಂದ್

ಕೇವಲ ಉಡುಪಿ ಜಿಲ್ಲೆಯಲ್ಲೇ 13 ಸಾವಿರಕ್ಕೂ ಅಧಿಕ ನಾಗಬನಗಳಿವೆ. ನಾಗನಿಗೆ ಸಂಬಂಧಿಸಿದ ಹಲವಾರು ಕ್ಷೇತ್ರಗಳಿವೆ. ಇಲ್ಲಿನ ಅರ್ಚಕರಿಗೆ ನಾಗರಪಂಚಮಿಯಂದು ಕೈತುಂಬ ಆದಾಯ ಬರುತ್ತಿತ್ತು. ಆದರೆ ಈ ವರ್ಷ ಈ ತಟ್ಟೆ ಕಾಸಿಗೂ ಕಲ್ಲು ಬಿದ್ದಿದೆ. ಜನರು ತಮ್ಮ ನಾಗಬನಗಳಲ್ಲಿ ಹೂವು ಹಿಂಗಾರ ಸೀಯಾಳ ಮೊದಲಾದ ದ್ರವ್ಯಗಳನ್ನು ಬಿಟ್ಟು ಹೋಗುವ ಮೂಲಕ ತಮ್ಮ ಹರಕೆಯನ್ನು ಸಮರ್ಪಿಸುತ್ತಿದ್ದಾರೆ.

Coronavirus Effect On Nagarapanchami Festival In Karavali Districts


ಉಳಿದವರು ಮನೆಗಳಲ್ಲೇ ನಾಗರಪಂಚಮಿಯನ್ನು ಆಚರಿಸುತ್ತಿದ್ದಾರೆ. ಇದೇ ಹೊತ್ತಿಗೆ ಈ ದಿವಸ ಹೂವು ಹಣ್ಣು ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿತ್ತು. ಇಂದು ಹೂವು ಹಣ್ಣಿನ ಮಾರುಕಟ್ಟೆಯೂ ಬಿಕೋ ಎನ್ನುತ್ತಿದೆ.

English summary
Karavali districts are famous for nagaradhane. But this time, coronavirus has not allowed people to celebrate nagara panchami grandly,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X