ಕಾಣೆಯಾದ ಮೀನುಗಾರರ ಪತ್ತೆಗೆ ಒತ್ತಾಯಿಸಿ ರಸ್ತೆಗಿಳಿಯಲಿದ್ದಾರೆ ಮೀನುಗಾರರು
ಉಡುಪಿ, ಜನವರಿ 04: ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಏಳು ಮೀನುಗಾರರು ನಾಪತ್ತೆಯಾಗಿ 20 ದಿನ ಕಳೆದಿದೆ ಆದರೆ ಸರ್ಕಾರಗಳು ಮೀನುಗಾರರ ಪತ್ತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳದಿರುವುದು ಮೀನುಗಾರರಲ್ಲಿ ಆಕ್ರೋಶ ಹೆಚ್ಚಿಸಿದೆ.
ಈವರೆಗೆ ಪತ್ತೆಯಾಗದ ಮಲ್ಪೆ ಮೀನುಗಾರರು : ಆತಂಕ ವ್ಯಕ್ತಪಡಿಸಿದ ಪೇಜಾವರ ಶ್ರೀ
ನಾಪತ್ತೆಯಾಗಿರು ಮೀನುಗಾರರನ್ನು ಹುಡುಕುವಲ್ಲಿ ರಾಜ್ಯ ಹಾಗು ಕೇಂದ್ರ ಸರಕಾರ ವಿಫಲವಾಗಿರುವುದನ್ನು ಖಂಡಿಸಿ ಮಲ್ಪೆ ಮೀನುಗಾರರ ಸಂಘ ಜನವರಿ 6 ರಂದು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಪ್ರತಿಭಟನೆಯ ಅಂಗವಾಗಿ ರಾಷ್ಟ್ರೀಯ ಹೆದ್ದಾರಿ ತಡೆ ಚಳುವಳಿ ನಡೆಸಲು ತೀರ್ಮಾನಿಸಿದ್ದಾರೆ.
ಇನ್ನೂ ಸಿಗದ ಬೋಟ್ ಸುಳಿವು: ಗಡುವು ನೀಡಿದ ಮಲ್ಪೆ ಮೀನುಗಾರರ ಸಂಘ
ಈ ಕುರಿತು ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದಕ್ಷಿಣ ಕನ್ನಡ ಹಾಗು ಉಡುಪಿ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್, ಕಣ್ಮರೆಯಾಗಿರುವ 7 ಮಂದಿ ಮೀನುಗಾರರ ಪತ್ತೆಗೆ ರಾಜ್ಯ- ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕರಾವಳಿಯ ಮೀನುಗಾರರು ಅನಾಥವಾಗಿದ್ದಾರೆ. ಸರ್ಕಾರಗಳ ನಿರ್ಲಕ್ಷತೆಯ ವಿರುದ್ಧ ಪ್ರತಿಭಟನೆಗೆ ಮೀನುಗಾರರು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಜನವರಿ 6 ರಂದು ಪ್ರತಿಭಟನೆಯ ಅಂಗವಾಗಿ ಮಲ್ಪೆಯಿಂದ ಉಡುಪಿಯವರೆಗೆ ಪಾದಯಾತ್ರೆ ಮಾಡುತ್ತೇವೆ. 50 ಸಾವಿರ ಮಂದಿ ರಾಷ್ಟ್ರೀಯ ಹೆದ್ದಾರಿ ತಡೆ ಮಾಡುತ್ತೇವೆ. ರಾಜ್ಯ, ಕೇಂದ್ರ ಸರ್ಕಾರಕ್ಕೆ ಬಿಸಿಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟ ಪಡಿಸಿದರು. ಮೀನುಗಾರರ ನಾಪತ್ತೆ ಪ್ರಕರಣದ ಬಗ್ಗೆ ರಾಜ್ಯ ಸರಕಾರ ತಲೆ ಕೆಡಿಸಿಕೊಡಿಲ್ಲ. ಸಿಎಂ ಹಾಗು ಉಸ್ತುವಾರಿ ಸಚಿವರು ಇತ್ತ ತಲೆಯೇ ಹಾಕಿಲ್ಲ. ಇದೇ ರೀತಿ ರೈತರಿಗೆ ಸಮಸ್ಯೆಯಾದಾಗಲೂ ಅಸಡ್ಡೆ ತೋರಿಸುತ್ತೀರಾ? ಎಂದು ಅವರು ಕಿಡಿಕಾರಿದರು.
ನೆರವು ಕೋರಿ ಸುಷ್ಮಾ ಸ್ವರಾಜ್ ಗೆ ಆರ್ ವಿ ದೇಶಪಾಂಡೆ ಪತ್ರ
ಈ ನಡುವೆ ಜನವರಿ 6 ರಂದು ಹಮ್ಮಿಕೊಂಡಿರು ರಾಷ್ಟ್ರೀಯ ಹೆದ್ದಾರಿ ತಡೆ ಬೆಂಬಲಿಸಿ ಮಂಗಳೂರು ಬಂದರಿನಲ್ಲಿ ನಡೆಯುವ ಎಲ್ಲಾ ಮೀನುಗಾರಿಕಾ ಚಟುವಟಿಕೆ ಬಂದ್ ಮಾಡಲು ನಿರ್ಧರಿಸಲಾಗಿದೆ.