ಅಲ್ಲಿ ಬೈ ಎಲೆಕ್ಷನ್ ಬಡಿದಾಟ, ಇಲ್ಲಿ ಕೋಣಗಳ ಕಾದಾಟ; ಟ್ರೋಲ್ ದುನಿಯಾ
ಉಡುಪಿ, ನವೆಂಬರ್ 18: ಅತ್ತ ಉಪ ಚುನಾವಣೆಯಲ್ಲಿ ಕದನ ಕಲಿಗಳ ಕಾಳಗ ಸಿದ್ಧವಾಗುತ್ತಿದ್ದರೆ ಇತ್ತ ಕುಂದಾಪುರದಲ್ಲಿ ಕೂಡ ಭರ್ಜರಿ ಕೋಣಗಳ ಕಾಳಗ ನೋಡುವಂತಾಗಿದೆ. ಸದ್ಯ ಈ ಕಾಳಗವನ್ನೇ ಮೂರು ಪಕ್ಷಗಳಿಗೆ ಹೋಲಿಸಿ ಟ್ರೋಲ್ ಮಾಡಲಾಗುತ್ತಿದೆ.
ಯೋಗಿ ಆದಿತ್ಯನಾಥ್ ಬಳಿ ದೂರು ಹೇಳಲು ಬಂದ ಗೂಳಿ!
ಹೌದು... ಕುಂದಾಪುರದ ಬಸ್ರೂರು ಮುಖ್ಯ ಪೇಟೆಯ ಬಸ್ ನಿಲ್ದಾಣದಲ್ಲಿ ಮೂರು ಕೋಣಗಳು ಭರ್ಜರಿ ಕಾದಾಟ ನಡೆಸಿವೆ. ಕಾದಾಟ ನೋಡಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಭಯ ಭೀತರಾಗುತ್ತಿದ್ದಂತೆ, ಸ್ಥಳೀಯರು ಬೆಂಕಿ ಹಾಕಿ, ಪಟಾಕಿ ಸಿಡಿಸಿ, ನೀರು ಚೆಲ್ಲಿ ಕೋಣಗಳನ್ನು ಓಡಿಸುವ ಪ್ರಯತ್ನ ನಡೆಸಿದ್ದಾರೆ. ಆದರೂ ಮದವೇರಿದ ಕೋಣಗಳು ಕಾಳಗ ನಿಲ್ಲಿಸಿಲ್ಲ. ಮೂರು ನಿಮಿಷಗಳ ಕಾಲ ಈ ಗೂಳಿ ಕಾಳಗ ಮುಂದುವರೆದೇ ಇತ್ತು.
ಸ್ಥಳೀಯ ದೇವಸ್ಥಾನಕ್ಕೆ ಬಿಟ್ಟ ಕೋಣಗಳು ಇವಾಗಿದ್ದು, ಯಾರು ಕೂಡ ಕೋಣಗಳಿಗೆ ಹೊಡೆಯುವ ಗೋಜಿಗೆ ಹೋಗದ ಕಾರಣ ಗೂಳಿ ಕಾಳಗ ನಿಲ್ಲಿಸಲು ಹರಸಾಹಸ ಪಡಬೇಕಾಯಿತು. ಸದ್ಯ ಕೋಣದ ಕಾಳಗದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಉಪಚುನಾವಣೆಯಲ್ಲಿ ಕಾಳಗಕ್ಕೆ ಇಳಿದಿರುವ ಮೂರು ಪಕ್ಷಗಳಿಗೆ ಹೋಲಿಸಿ ಟ್ರೋಲ್ ಮಾಡಲಾಗುತ್ತಿದೆ!!