ಉಡುಪಿಯಲ್ಲಿ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು
ಉಡುಪಿ, ಮಾರ್ಚ್ 10: ಕಾರು ರಸ್ತೆ ಡಿವೈಡರ್ ಏರಿ ಬಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿಯ ರಾಷ್ಟ್ರೀಯ ಹೆದ್ದಾರಿ 66 ರ ಮೂಡುಬೆಟ್ಟು ಬಳಿ ನಡೆದಿದೆ.
ಬೈಕ್ ಸವಾರ ಉದ್ಯಾವರ ಕಟ್ಟೆಗುಡ್ಡೆ ನಿವಾಸಿ ಸುಧಾಕರ್ (45) ಮೃತ ದುರ್ದೈವಿ. ಬೆಳಿಗ್ಗೆ 9.45 ರ ಸುಮಾರಿಗೆ ತನ್ನ ಸ್ಕೂಟರ್ ನಲ್ಲಿ ಕಾಪು ಕಡೆ ಹೋಗುತ್ತಿದ್ದಾಗ ಕಾಪುವಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಎರ್ಟಿಗಾ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿದೆ.
ಬಸ್ ನಲ್ಲೇ ಹೃದಯಾಘಾತ; ಕುಂದಾಪುರದ ಯುವಕ ಸಾವು
ಈ ವೇಳೆ ಮತ್ತೊಂದು ಬದಿಯ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಕಾರು ಸ್ಕೂಟರ್ ನ ಮೇಲೆ ಎರಗುತ್ತಿದ್ದಂತೆ ಸುಧಾಕರ್ ಸ್ಥಳದಲ್ಲೇ ಮೃತಪಟ್ಟಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಉಡುಪಿಯಲ್ಲಿ ಜೆಸಿಬಿ ತಡೆದು ಹೆಬ್ಬಾವು ರಕ್ಷಿಸಿದ ಉರಗ ತಜ್ಞ
ಸುಧಾಕರ್ ಪೈಂಟಿಂಗ್ ಕಾಂಟ್ರಾಕ್ಟರ್ ವೃತ್ತಿ ನಡೆಸುತ್ತಿದ್ದರು. ಮೃತರು 8 ತಿಂಗಳಿನ ಮಗು ಮತ್ತು ಪತ್ನಿಯನ್ನು ಅಗಲಿದ್ದಾರೆ. ಕಾಪು ಎಸ್ಐ ರಾಜಶೇಖರ ಬಿ. ಸಾಗನೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.