ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ: ಆಂಬುಲೆನ್ಸ್ - ಲಾರಿ ನಡುವೆ ಭೀಕರ ಅಪಘಾತ, ಮೂವರ ಸಾವು

|
Google Oneindia Kannada News

ಉಡುಪಿ, ಅಕ್ಟೋಬರ್ 27: ನಿನ್ನೆ ತಡ ರಾತ್ರಿ ರೋಗಿಯಬ್ಬರನ್ನು ಸಾಗಿಸುತ್ತಿದ್ದ ಆಂಬುಲೆನ್ಸ್ ಮತ್ತು ಟ್ಯಾಂಕರ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕೋಟ ಬಳಿ ನಡೆದಿದೆ.

ರೈಲು ಅಪಘಾತಕ್ಕೆ ತಿಂಗಳಿಗೆ 130 ಜನ ಆಹುತಿ: ಸಿಗುತ್ತಿಲ್ಲ ದುರಂತಗಳಿಗೆ ಮುಕ್ತಿ ರೈಲು ಅಪಘಾತಕ್ಕೆ ತಿಂಗಳಿಗೆ 130 ಜನ ಆಹುತಿ: ಸಿಗುತ್ತಿಲ್ಲ ದುರಂತಗಳಿಗೆ ಮುಕ್ತಿ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಉಲ್ಲಾಸ್ ತಳೇಕರ್ ಎಂಬವರು ಕಳೆದ ಕೆಲವು ದಿನಗಳಿಂದ ಜಾಂಡೀಸ್ ರೋಗ ದಿಂದ ಬಳಲುತ್ತಿದ್ದು ಅವರಿಗೆ ವಿಪರೀತ ಜ್ವರ ಆವರಿಸಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಮಣಿಪಾಲದ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಲು ತೆರಳುತ್ತಿದ್ದ ಸಂದರ್ಭದಲ್ಲಿಈ ಘಟನೆ ಸಂಭವಿಸಿದೆ.

ನಿಂತ ನೆಲವೇ ಬಾಯ್ತೆರೆದು ನುಂಗಲು ಹೊರಟಿತು!: ಎದೆ ಝಲ್ಲೆನಿಸುವ ದೃಶ್ಯ ಸೆರೆ ನಿಂತ ನೆಲವೇ ಬಾಯ್ತೆರೆದು ನುಂಗಲು ಹೊರಟಿತು!: ಎದೆ ಝಲ್ಲೆನಿಸುವ ದೃಶ್ಯ ಸೆರೆ

ಉಲ್ಲಾಸ್ ತಳೇಕರ್ ಅವರೊಂದಿಗೆ ಅವರ ಸಂಬಂಧಿಕ ಅಮದಳ್ಳಿ ನಿವಾಸಿ ಅಶೋಕ್ ಬಾಡ್ಕರ್ (38) ಮತ್ತು ಶೈಲೇಶ್ ತಳೇಕರ್ (40) ಆಂಬುಲೆನ್ಸ್ ನಲ್ಲಿ ತೆರಳಿದ್ದರು.

Ambulance accident near Kota, 3 dead

ಆಂಬುಲೆನ್ಸ್ ಉಡುಪಿ ಸಮೀಪದ ಕೋಟದ ಮಣೂರು ಎಂದಬಲ್ಲಿ ಅಪಘಾತ ಅಂಭವಿಸಿದೆ. ಆಂಬುಲೆನ್ಸ್ ಎದುರಿನಿಂದ ಬರುತ್ತಿದ್ದ ಟ್ಯಾಂಕರಿಗೆ ಡಿಕ್ಕಿ ಹೊಡೆದ ಬಳಿಕ ಪಲ್ಟಿಯಾಗಿದೆ.ಈ ಭೀಕರ ಘಟನೆಯಲ್ಲಿ ಉಲ್ಲಾಸ್ ತಳೇಕರ್ (45) , ಅಶೋಕ್ ಬಾಡ್ಕರ್ (38) ಮತ್ತು ಶೈಲೇಶ್ ತಳೇಕರ್ (40) ಮೃತಪಟ್ಟಿದ್ದಾರೆ.

ಮೈಸೂರಿನಲ್ಲಿ ಹಳಿ ತಪ್ಪಿದ ಪೆಟ್ರೋಲಿಯಂ ತುಂಬಿದ ರೈಲುಮೈಸೂರಿನಲ್ಲಿ ಹಳಿ ತಪ್ಪಿದ ಪೆಟ್ರೋಲಿಯಂ ತುಂಬಿದ ರೈಲು

ಘಟನೆಯಲ್ಲಿ ಗಂಭೀರವಾಗಿ ಗಾಯ ಗೊಂಡ ಸರಿತಾ ತಳೇಕರ್, ರಾಘವೇಂದ್ರ ಎಂಬವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಬುಲೆನ್ಸ್ ನಜ್ಜು-ಗುಜ್ಜು ಆಗಿದೆ. ಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

English summary
An Ambulance carrying a patient and other from Karwar to Manipal met with an accident near Kota of Udupi district. In this incident 3 persons died on the spot and two seriously injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X