ಕಾರ್ಕಳದ ಅಜೆಕಾರದಲ್ಲಿ ಬಡ ವಿದ್ಯಾರ್ಥಿನಿಗೆ ನವೀಕೃತ ಮನೆ ಹಸ್ತಾಂತರ
ಉಡುಪಿ, ಏಪ್ರಿಲ್ 14: ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಯು ಕಾರ್ಕಳ ತಾಲೂಕಿನ ಅಜೆಕಾರದ ವಿದ್ಯಾಪೋಷಕ್ ಫಲಾನುಭವಿ ಅಂತಿಮ ಪದವಿ ಬಡ ವಿದ್ಯಾರ್ಥಿನಿ ನಿರೀಕ್ಷಾಳಿಗೆ ನವೀಕೃತ ಮನೆ 'ಶ್ರೀಗುರು' ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಮನೆಯ ಪ್ರಾಯೋಜಕತ್ವ ವಹಿಸಿದ C4Uನ ಮಾಲೀಕ ಗುರುರಾಜ ಅಮೀನ್ ಮತ್ತು ಜಯಲಕ್ಷ್ಮೀ ಅಮೀನ್ ದಂಪತಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಉದ್ಯಮಿ ಯು.ವಿಶ್ವನಾಥ ಶೆಣೈ, ನಿವೃತ್ತ ಅಧ್ಯಾಪಕ ರಾಜಗೋಪಾಲ ಆಚಾರ್ಯ, ನಿವೃತ್ತ ಬ್ಯಾಂಕ್ ಉದ್ಯೋಗಿ ಬಾಲಕೃಷ್ಣ ಭಟ್ ಕೆ. ಭಾಗವಹಿಸಿದ್ದರು.
ವಿದ್ಯಾರ್ಥಿನಿ ನಿರೀಕ್ಷಾ ಮಾತನಾಡಿ, ""ವಿದ್ಯಾಪೋಷಕ್ ವಿದ್ಯಾಥಿಗಳ ಎಲ್ಲಾ ರೀತಿಯ ಕಷ್ಟಕ್ಕೆ ಸ್ಪಂದಿಸುತ್ತದೆ. ನಾನು ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಪಡೆದ ಬಳಿಕ ನನ್ನಂತೆಯೇ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತೇನೆ'' ಎಂದು ಹೃದಯತುಂಬಿ ತನ್ನ ಅನಿಸಿಕೆ ವ್ಯಕ್ತಪಡಿಸಿದಳು. ಈ ಸಂಸ್ಥೆ ನಿರ್ಮಿಸಿ ಕೊಡುತ್ತಿರುವ 19ನೇ ಮನೆಯಾಗಿದೆ.
Recommended Video
#Covid19Updates:
8155
ಜನರಿಗೆ
ಕೋವಿಡ್
ಸೋಂಕು..
23
ಮಂದಿ
ಬಲಿ
|
Oneindia
Kannada
Comments
English summary
A poor student gets a renovated house from her teacher andYaksha Kalaranga in Ajekar, Karkala taluk in Udupi district.
Story first published: Wednesday, April 14, 2021, 17:26 [IST]