ಉಡುಪಿಯಲ್ಲೂ ಕೆಎಎಸ್ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ
ಉಡುಪಿ, ನವೆಂಬರ್ 07: ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಉಡುಪಿಯಲ್ಲಿ ಶನಿವಾರ ಬೆಳ್ಳಂಬೆಳಿಗ್ಗೆ ಕೆಎಎಸ್ ಅಧಿಕಾರಿ ಸುಧಾ ಅವರ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ.
ಉಡುಪಿ ಜಿಲ್ಲೆಯ ಚಾಂತಾರಿನಲ್ಲಿ ಇರುವ ಸುಧಾ ಅವರ ಗಂಡನ ಮನೆ ಮೇಲೆ ದಾಳಿ ನಡೆದಿದ್ದು, ಹೆಬ್ರಿ ತೆಂಕಬೆಟ್ಟು ಸೇರಿದಂತೆ ರಾಜ್ಯದ 6 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ ಎಸಿಬಿ ಅಪಾರ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಬೆಂಗಳೂರು: ಕೆಎಎಸ್ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ
ಡಾ.ಸುಧಾ ,ಉಡುಪಿಯಲ್ಲಿ ಈ ಹಿಂದೆ ಭೂಸ್ವಾಧೀನಾಧಿಕಾರಿಯಾಗಿದ್ದರು. ಉಡುಪಿಯ ವಡ್ಡರ್ಸೆ ಮತ್ತು ಕಂದಾವರ ಬಳಿಯೂ ಸುಧಾ ಆಸ್ತಿ ಹೊಂದಿದ್ದರು. ಸದ್ಯ ಅಧಿಕಾರಿಗಳು, ಸೊತ್ತು, ಮನೆ ಮತ್ತು ಜಮೀನುಗಳ ದಾಖಲೆ ಪರಿಶೀಲಿಸುತ್ತಿದ್ದು, ಪರಿಶೀಲನೆ ಕಾರ್ಯ ಇಡೀ ದಿನ ನಡೆಯುವ ಸಾಧ್ಯತೆ ಇದೆ.
Recommended Video
ಶನಿವಾರ ಬೆಳಿಗ್ಗೆ ಎಸಿಬಿ ಅಧಿಕಾರಿಗಳು ಸುಧಾ ಅವರ ಬೆಂಗಳೂರು ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಕೊಡಿಗೇಹಳ್ಳಿಯ ಭವ್ಯ ಬಂಗಲೆಯಲ್ಲಿ ಕೆಜಿಗಟ್ಟಲೆ ಚಿನ್ನಾಭರಣ ಹಗೂ ಹತ್ತು ಲಕ್ಷ ನಗದು ದೊರೆತಿದೆ. ಮೈಸೂರಿನಲ್ಲಿಯೂ ದಾಳಿ ನಡೆದಿರುವುದಾಗಿ ತಿಳಿದುಬಂದಿದೆ.