ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

8 ವರ್ಷದ ಬಾಲಕಿ ಮೇಲ್ ರೇಪ್, ಬೆಚ್ಚಿಬಿದ್ದ ಕುಂದಾಪುರ

8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದ ಬಿದ್ಕಲ್‍ಕಟ್ಟೆಯಲ್ಲಿ ನಡೆದಿದೆ. 53 ವರ್ಷದ ರಾಮದಾಸ್ ಪ್ರಭು ಎಂಬಾತ ಚಾಕಲೇಟ್ ನೀಡಿ ಪುಸಲಾಯಿಸಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ.

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಎಪ್ರಿಲ್ 7: 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದ ಬಿದ್ಕಲ್‍ಕಟ್ಟೆಯಲ್ಲಿ ನಡೆದಿದೆ. 53 ವರ್ಷದ ರಾಮದಾಸ್ ಪ್ರಭು ಎಂಬಾತ ಚಾಕಲೇಟ್ ನೀಡಿ ಪುಸಲಾಯಿಸಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ.

ಕೂಲಿ ಕೆಲಸಕ್ಕೆಂದು ಕೋಟ ಠಾಣಾ ವ್ಯಾಪ್ತಿಯ ಬಿದ್ಕಲ್ ಕಟ್ಟೆ ಎಂಬ ಊರಿಗೆ ತಮಿಳುನಾಡು ಮೂಲದ ಬಡ ಕುಟುಂಬವೊಂದು ಬಂದಿತ್ತು. ಯಾರೂ ಇಲ್ಲದ ವೇಳೆ ರಾಮದಾಸ್ ಪ್ರಭು ಬಾಲಕಿಗೆ ಚಾಕಲೇಟ್ ನೀಡಿ, ಬೆದರಿಸಿ ಅತ್ಯಾಚಾರವೆಸಗಿದ್ದ ಎಂಬುದು ಬಯಲಾಗಿದೆ.['ನಾವು ಯಾರಿಗೂ ಹೆದರಲ್ಲ,' ಉಡುಪಿ ಡಿಸಿ ಪ್ರಿಯಾಂಕಾ ಖಡಕ್ ಮಾತು]

53 year old raped on 8 year girl in Kundapur

ಶುಕ್ರವಾರ ಬಾಲಕಿ ಹೊಟ್ಟೆ ನೋವು ಎಂದು ಮನೆಯವರಲ್ಲಿ ಹೇಳಿಕೊಂಡಿದ್ದಳು. ಹೀಗಾಗಿ ಬಾಲಕಿಯನ್ನು ಮನೆಯವರು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.

ವಿಷಯ ಗೊತ್ತಾಗುತ್ತಿದ್ದಂತೆ ಆರೋಪಿ ಪ್ರಭು ಪರಾರಿಯಾಗಿದ್ದ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಬಾಲಕಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.[ಗಲ್ಫ್ ಉದ್ಯೋಗ ನಂಬಿ ಮೋಸ ಹೋದ ಮಹಿಳೆಯ ದುರಂತ ಕಥೆ]

ಅಡಕೆ ತೋಟದಲ್ಲಿ ಕಿಂಗ್ ಕೋಬ್ರಾ

ಬೃಹತ್ ಗಾತ್ರದ ಕಾಳಿಂಗ ಸರ್ಪ ಶುಕ್ರವಾರ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೆಳ್ಳಾಲ ಚೂರಿ ಕೊಡ್ಲು ವಿನಲ್ಲಿ ಕಂಡು ಬಂತು.

53 year old raped on 8 year girl in Kundapur

ಚೂರಿ ಕೊಡ್ಲು ನಿವಾಸಿ ಬಾಬು ಆಚಾರ್ ಎಂಬುವವರ ಅಡಿಕೆ ತೋಟದಲ್ಲಿ15 ಅಡಿ ಉದ್ದದ ಕಾಳಿಂಗ ಇರುವುದು ಗೊತ್ತಾಯಿತು. ವಿಷಯ ಗೊತ್ತಾಗುತ್ತಿದ್ದಂತೆ ಕಾಳಿಂಗನನ್ನ ನೋಡಲು ಜನರು ನೆರೆದರು. ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿ ಕೃಷ್ಣ ಆಚಾರ್, ಅರಣ್ಯ ಇಲಾಖಾ ಸಿಬ್ಬಂದಿ ಜತೆಗೂಡಿ ಕಾಳಿಂಗವನ್ನ ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟರು.

English summary
In a shocking incident 53 year old man raped on 8 year old child in Kundapur talluk of Udupi district. Child was admitted to Manipal hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X