ಜಾನಪದ ವಿವಿಯಲ್ಲಿ 3 ವರ್ಷದ ಯಕ್ಷಗಾನ ಡಿಪ್ಲೊಮಾ ಕೋರ್ಸ್
ಉಡುಪಿ, ಮೇ 29: ಹಾವೇರಿಯಲ್ಲಿರುವ ಜಾನಪದ ವಿಶ್ವವಿದ್ಯಾನಿಲಯದಲ್ಲಿ ಈ ವರ್ಷದಿಂದ ಯಕ್ಷಗಾನ ಹಾಗೂ ಬಯಲಾಟದ ಮೂರು ವರ್ಷದ ಡಿಪ್ಲೊಮಾ ಕೋರ್ಸ್ ಆರಭಿಸಲಾಗುವುದು ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಇಲ್ಲಿ ನಡೆದ ತಾಳಮದ್ದಲೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಈ ವಿಚಾರ ತಿಳಿಸಿದರು.
ಯಕ್ಷಗಾನವು ಕನ್ನಡ ನಾಡಿನ ಸಮೃದ್ಧ ಕಲೆ. ಅದರ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸಬೇಕು. ಅದಕ್ಕೆ ಸಂಘ-ಸಂಸ್ಥೆಗಳು ಸಹ ಸಹಕಾರವನ್ನು ನೀಡಬೇಕು ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರೊ ಎಂಬಿ ಪುರಾಣಿಕ್, ಜಾತ್ಯತೀತತೆ ಅನ್ನೋ ಹೆಸರಿನಲ್ಲಿ ಮಹಾಭಾರತ, ರಾಮಾಯಣ, ಪಂಚತಂತ್ರದ ಕಥೆಗಳು ಪಠ್ಯದಿಂದ ಮಾಯವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.[ಯೇಸುಕ್ರಿಸ್ತರ ಜೀವನಚರಿತ್ರೆಗೆ ಯಕ್ಷಗಾನದ ಟಚ್ ನೀಡಿದ ಕೇಶವಯ್ಯಾ]
ಈ ಕಾರಣಕ್ಕೆ ಮಕ್ಕಳು ಪುರಾಣದ ವಿಚಾರಗಳನ್ನು ತಿಳಿದುಕೊಳ್ಳುವುದರಿಂದ ವಂಚಿತರಾಗುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಮಟ್ಟಿ ಮುರಳೀಧರ ರಾವ್ ಪ್ರಶಸ್ತಿಯನ್ನು ಡಾ.ಡಿ.ಸದಾಶಿವ ಭಟ್ಟ ಹಾಗೂ ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ಡಾ.ಪಿ.ಶಾಂತರಾಮ ಪ್ರಭು ಅವರಿಗೆ ಪ್ರದಾನ ಮಾಡಲಾಯಿತು.