ಕೃಷ್ಣನಗರಿಯಲ್ಲಿಂದು ಕೊರೊನಾ ವೈರಸ್ ಸ್ಪೋಟ: 109 ಪಾಸಿಟಿವ್, ಮೂರು ಸಾವು!
ಉಡುಪಿ, ಜುಲೈ 16: ಮಹಾಮಾರಿ ಕೊರೊನಾ ವೈರಸ್ ಇಂದು ಕೂಡಾ ತನ್ನ ಅಟ್ಟಹಾಸವನ್ನು ಮುಂದುವರೆಸಿದ್ದು, ಉಡುಪಿ ಜಿಲ್ಲೆಯಲ್ಲಿ ಹಲವು ದಿನಗಳ ಬಳಿಕ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶತಕ ಬಾರಿಸಿದೆ. ಗುರುವಾರ ಒಂದೇ ದಿನ 109 ಮಂದಿಗೆ ಸೋಂಕು ದೃಢಪಟ್ಟಿವೆ.
Recommended Video
Oxford
Covid
Vaccine
ಮಾನವ
ಪ್ರಯೋಗದ
ಪಲಿತಾಂಶ
ಇಂದು
|
Oneindia
Kannada
ಗುರುವಾರ ಒಂದೇ ದಿನದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದ್ದು, ಕೃಷ್ಣನಗರಿ ಉಡುಪಿ ಜಿಲ್ಲೆಯ ಜನರಲ್ಲಿ ಆತಂಕ ಮನೆಮಾಡಿದೆ.
ಕೊರೊನಾ ವೈರಸ್ ಗೆ ಉಡುಪಿಯಲ್ಲಿ ಸರಣಿ ಸಾವು: ಆತಂಕ!
ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಲ್ಲಿಂದು ಮೂವರು ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಇಂದು 80 ಕೊರೊನಾ ಸೋಂಕಿತರು ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ. ಒಟ್ಟು ಸೊಂಕಿತರ ಸಂಖ್ಯೆ 1895 ಕ್ಕೆ ಏರಿಕೆ ಆಗಿದೆ. ಇನ್ನೂ 594 ವರದಿಗಳು ಬರಲು ಬಾಕಿ ಇವೆ. ಇಂದು 489 ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್ ಚಂದ್ರ ಸೂಡಾ ಮಾಹಿತಿ ನೀಡಿದ್ದಾರೆ.
Comments
coronavirus cases health department district hospital kannada news udupi ವೈರಸ್ ಆರೋಗ್ಯ ಇಲಾಖೆ ಆಸ್ಪತ್ರೆ ಕನ್ನಡ ಸುದ್ದಿ ಉಡುಪಿ
English summary
A total of 109 people have been diagnosed with coronavirus in Udupi district on Thursday.