ತುಮಕೂರು : ಮಹಿಳೆ ಅಪಹರಣ, ಸಾಮೂಹಿಕ ಅತ್ಯಾಚಾರ
ತುಮಕೂರು, ಅಕ್ಟೋಬರ್ 15 : ಬೆಂಗಳೂರಿಗೆ ಬರಲು ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ. ಅಸ್ವಸ್ಥಗೊಂಡಿರುವ ಮಹಿಳೆಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ತುಮಕೂರು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಮಂಗಳವಾರ
ಬೆಳಗ್ಗೆ
ಈ
ಘಟನೆ
ನಡೆದಿದೆ.
5
ಮಂದಿ
ದುಷ್ಕರ್ಮಿಗಳ
ತಂಡ
ತುಮಕೂರಿನ
ಟೌಲ್
ಹಾಲ್
ಬಳಿ
ಬೆಂಗಳೂರಿಗೆ
ಬರಲು
ಬಸ್ಸಿಗಾಗಿ
ಕಾಯುತ್ತಿದ್ದ
28
ವರ್ಷದ
ಮಹಿಳೆಯನ್ನು
ಟಾಟಾ
ಸುಮೋ
ವಾಹನದಲ್ಲಿ
ಅಪಹರಿಸಿ,
ಸಾಮೂಹಿಕ
ಅತ್ಯಾಚಾರ
ನಡೆಸಿದ್ದು,
ಬೆಂಗಳೂರು-ತುಮಕೂರು
ರಾಷ್ಟ್ರೀಯ
ಹೆದ್ದಾರಿಯ
ಹಳೆ
ನಿಜಗಲ್
ಸಮೀಪ
ಆಕೆಯನ್ನು
ಬಿಟ್ಟು
ಪರಾರಿಯಾಗಿದೆ.
[ಬೆಂಗಳೂರು
:
ಬಿಪಿಒ
ಉದ್ಯೋಗಿ
ಮೇಲೆ
ಗ್ಯಾಂಗ್
ರೇಪ್]
ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಸಾರ್ವಜನಿಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೊದಲು ಆಕೆಗೆ ದಾಬಸ್ ಪೇಟೆಯಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ತೀವ್ರ ರಕ್ತಸ್ರಾವವಾಗುತ್ತಿದ್ದರಿಂದ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. [ಅತ್ಯಾಚಾರ ತಡೆಗೆ ಸರ್ಕಾರ ಯಾವ ನಿಯಮ ಅನುಸರಿಸಬೇಕು?]
ಅತ್ಯಾಚಾರಕ್ಕೊಳಗಾದ ಮಹಿಳೆ ದಾಸರಹಳ್ಳಿಯ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ದಾಬಸ್ಪೇಟೆ ಮತ್ತು ತುಮಕೂರು ಗ್ರಾಮಾಂತರ ಪೊಲೀಸರು ಪ್ರಕರಣ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣಕ್ಕೆ ದೂರು ದಾಖಲಿಸಿಕೊಳ್ಳಲು ವಿಳಂಬ ಮಾಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತುಮಕೂರು
ಜಿಲ್ಲಾ
ಪೊಲೀಸ್
ವರಿಷ್ಠಾಧಿಕಾರಿ
ಕಾರ್ತಿಕ್
ರೆಡ್ಡಿ
ಅವರು
ಜಿಲ್ಲಾಸ್ಪತ್ರೆಗೆ
ಭೇಟಿ
ನೀಡಿ
ಮಹಿಳೆಯ
ಆರೋಗ್ಯದ
ಬಗ್ಗೆ
ಮಾಹಿತಿ
ಪಡೆದಿದ್ದಾರೆ.
ಅವರ
ಆದೇಶದ
ಅನ್ವಯ
ತುಮಕೂರು
ಗ್ರಾಮಾಂತರ
ಪೊಲೀಸರು
ಪ್ರಕರಣದ
ತನಿಖೆಯನ್ನು
ನಡೆಸುತ್ತಿದ್ದಾರೆ.
5 ತಂಡಗಳ ರಚನೆ : 'ಆರೋಪಿಗಳ ಪತ್ತೆಗಾಗಿ 5 ತಂಡಗಳನ್ನು ರಚನೆ ಮಾಡಲಾಗಿದೆ. ಆರೋಪಿಗಳ ಬಗ್ಗೆ ಕೆಲವು ಸುಳಿವುಗಳು ದೊರಕಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುತ್ತದೆ' ಎಂದು ತುಮಕೂರು ಎಸ್ಪಿ ಕಾರ್ತಿಕ್ ರೆಡ್ಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.