ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀಗಳ ಸ್ಥಿತಿ ಚಿಂತಾಜನಕ, ಆದರೆ ಪ್ರಯತ್ನ ಕೈಬಿಟ್ಟಿಲ್ಲ: ವೈದ್ಯ ಪರಮೇಶ್

|
Google Oneindia Kannada News

ತುಮಕೂರು, ಜನವರಿ 21: ಸಿದ್ದಗಂಗಾ ಶ್ರೀಗಳ ಆರೋಗ್ಯ ಚಿಂತಾಜನಕ ಸ್ಥಿತಿಯಲ್ಲಿದೆ ಆದರೆ ನಾವು ಪ್ರಯತ್ನ ಕೈಬಿಟ್ಟಿಲ್ಲ ಎಂದು ಶ್ರೀಗಳ ಆಪ್ತ ವೈದ್ಯ ಪರಮೇಶ್ವರ್ ಹೇಳಿದರು.

ಸಿದ್ದಗಂಗಾ LIVE: ಚಿಂತಾಜನಕ ಸ್ಥಿತಿಯಲ್ಲಿದೆ ಶ್ರೀಗಳ ಆರೋಗ್ಯ: ಎಂಬಿ ಪಾಟೀಲಸಿದ್ದಗಂಗಾ LIVE: ಚಿಂತಾಜನಕ ಸ್ಥಿತಿಯಲ್ಲಿದೆ ಶ್ರೀಗಳ ಆರೋಗ್ಯ: ಎಂಬಿ ಪಾಟೀಲ

ಮಠದ ಆವರಣದಲ್ಲಿ ಸುದ್ದಿಗಾರರೊಂದಿಗೆ ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, ಪ್ರೊಟೀನ್ ಅಂಶ ಪೂರ್ಣವಾಗಿ ಕಡಿಮೆ ಆಗಿದೆ ಇದು ಆತಂಕಕಾರಿ ಎಂದು ಅವರು ಹೇಳಿದರು.

ಶಿವಕುಮಾರ ಸ್ವಾಮೀಜಿ ಆರೋಗ್ಯಕ್ಕಾಗಿ ಲಂಡನ್ ಕನ್ನಡಿಗರ ಪ್ರಾರ್ಥನೆ ಶಿವಕುಮಾರ ಸ್ವಾಮೀಜಿ ಆರೋಗ್ಯಕ್ಕಾಗಿ ಲಂಡನ್ ಕನ್ನಡಿಗರ ಪ್ರಾರ್ಥನೆ

ಕೃತಕ ಉಸಿರಾಟದ ವ್ಯವಸ್ಥೆ (ವೆಂಟಿಲೇಟರ್) ಅಳವಡಿಸಲಾಗಿದೆ. ಅಲ್ಬುಮಿನ್ ಉತ್ಪಾದನೆ ಪೂರ್ಣವಾಗಿ ನಿಂತಿದೆ. ಆದರೆ ನಾವು ಪ್ರಯತ್ನ ಕೈಬಿಟ್ಟಿಲ್ಲ. ನಮ್ಮ ತಂಡ ಚಿಕಿತ್ಸೆಯಲ್ಲಿ ನಿರತವಾಗಿದೆ ಎಂದು ಅವರು ಹೇಳಿದರು.

Siddaganga Seers health condition is critical but we did not give up: Ravindra

ಶ್ರೀಗಳ ರಕ್ತದೊತ್ತಡ, ಶ್ವಾಸಕೋಶದ ಕಾರ್ಯದಲ್ಲಿ ವ್ಯತ್ಯಾಸವಾಗಿದೆ. ನಾವು ಪೂರ್ಣ ಶ್ರಮವಹಿಸಿ ಚಿಕಿತ್ಸೆ ನೀಡುತ್ತಿದ್ದೇವೆ. ಆದರೆ ಎಷ್ಟರ ಮಟ್ಟಿಗೆ ಯಶಸ್ವಿ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ವೈದ್ಯ ಪರಮೇಶ್ವರ್ ಹತಾಶೆ ವ್ಯಕ್ತಪಡಿಸಿದರು.

ಸಿದ್ದಗಂಗಾ ಮಠಕ್ಕೆ ಎಚ್‌ಡಿಕೆ, ಮಠದ ಸಿಬ್ಬಂದಿ ಜೊತೆ ತುರ್ತು ಸಭೆಸಿದ್ದಗಂಗಾ ಮಠಕ್ಕೆ ಎಚ್‌ಡಿಕೆ, ಮಠದ ಸಿಬ್ಬಂದಿ ಜೊತೆ ತುರ್ತು ಸಭೆ

ನಮ್ಮ ಎಂಟು ಜನರ ವೈದ್ಯರ ತಂಡದೊಂದಿಗೆ ಬಿಜಿಎಸ್‌ನ ಹಲವು ತಜ್ಞ ವೈದ್ಯರು ಕೈಜೋಡಿಸಿದ್ದು, ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಪರಮೇಶ್ವರ್ ಅವರು ಹೇಳಿದರು.

English summary
Siddaganga Seer's health condition is very critical but we did not give up we trying hard says Seer's personal doctor Ravindra. He said protein is very less in his body, and he breathing with d help of ventilator.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X