ಸೋಮವಾರ ಬೆಳಗ್ಗೆ 11.44ಕ್ಕೆ ಶಿವ ಸಾಯುಜ್ಯ ಹೊಂದಿದರೆ ಸಿದ್ದಗಂಗಾ ಶ್ರೀ?
Recommended Video
ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಆರೋಗ್ಯ ಸ್ಥಿತಿ ತೀವ್ರವಾಗಿದೆ ಎಂಬ ಸುದ್ದಿ ಹರಿದಾಡುತ್ತಿರುವ ವೇಳೆಯಲ್ಲೇ ತುಮಕೂರು ಜಿಲ್ಲೆಯಲ್ಲಿ ಸೋಮವಾರ ಹಾಗೂ ಮಂಗಳವಾರ (ಜನವರಿ 21, 22) ರಜಾ ಘೋಷಿಸಲಾಗಿದೆ. ಈ ಮಧ್ಯೆ ಮಠದ ವಿದ್ಯಾ ಸಂಸ್ಥೆಯದು ಎನ್ನಲಾದ ಸುತ್ತೋಲೆಯಂದು ಹರಿದಾಡುತ್ತಿದ್ದು, ಅದೀಗ ಚರ್ಚೆಯ ವಿಷಯವಾಗಿದೆ.
Breaking News: ಕೋಟ್ಯಂತರ ಭಕ್ತರ ತೊರೆದು ಶಿವನೆಡೆಗೆ ನಡೆದ 'ನಡೆದಾಡುವ ದೇವರು'
ಆ ಸುತ್ತೋಲೆಯ ಪ್ರಕಾರ ಜನವರಿ 21ರ ಸೋಮವಾರ ಬೆಳಗ್ಗೆ 11.44ಕ್ಕೆ ಶಿವ ಸಾಯುಜ್ಯ ಹೊಂದಿದ್ದಾರೆ. ಅವರ ಕ್ರಿಯಾ ಸಮಾಧಿ ಕಾರ್ಯಗಳು/ ಅಂತ್ಯ ಸಂಸ್ಕಾರವನ್ನು ಜನವರಿ 22ರಂದು ಸಂಜೆ 4.30ಕ್ಕೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.
ರಜಾ ನಂತರ ತಮ್ಮ ತಮ್ಮ ಶಾಲೆ-ಕಾಲೇಜುಗಳಲ್ಲಿ ಶ್ರೀಗಳ ಭಾವಚಿತ್ರವನ್ನು ಇಟ್ಟು, ಗೌರವ ಸಲ್ಲಿಸಬೇಕು ಎಂದು ಹೇಳಲಾಗಿದೆ. ಆದರೆ ಶಿವಕುಮಾರ ಸ್ವಾಮೀಜಿ ಇಹ ಲೋಕ ತೊರೆದ ಸುದ್ದಿ ಮಧ್ಯಾಹ್ನ 1.57ರ ಹೊತ್ತಿಗೆ ಬಂದಿದೆ. ಅಂದಹಾಗೆ ಶಾಲೆ-ಕಾಲೇಜು ರಜಾ ಘೋಷಣೆಯ ಸುತ್ತೋಲೆಗೆ ಮಠದ ಕಾರ್ಯದರ್ಶಿಗಳಾದ ಟಿ.ಕೆ.ನಂಜುಂಡಪ್ಪ ಅವರ ಸಹಿ ಇದೆ.