ಸಿದ್ದಗಂಗಾಶ್ರೀಗಳ ನಿಧನವಾರ್ತೆ ತಡವಾಗಿ ಘೋಷಿಸಿದ ಕಾರಣ ಬಹಿರಂಗ!
Recommended Video
ಬೆಂಗಳೂರು, ಜನವರಿ 21 : ತ್ರಿವಿಧ ದಾಸೋಹಿ, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾದ ಸಮಯ ಹಾಗೂ ನಿಧನದ ವಾರ್ತೆಯನ್ನು ತಡವಾಗಿ ಘೋಷಿಸಿದ್ದೇಕೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ, ಇದೀಗ ನಿಧನ ವಾರ್ತೆ ತಡವಾಗಿ ಪ್ರಕಟಿಸಿದ ಕಾರಣ ಬಹಿರಂಗವಾಗಿದೆ. ಇದು ಶಿವಕುಮಾರ ಸ್ವಾಮೀಜಿಗಳ ಕೊನೆಆಸೆ ಕೂಡಾ ಆಗಿತ್ತು ಎಂಬುದು ಹುಬ್ಬೇರಿಸುವ ವಿಚಾರ.
ಸೋಮವಾರ ಜನವರಿ 21ರ ಬೆಳಗ್ಗೆ 11.44ಕ್ಕೆ ಲಿಂಗೈಕ್ಯರಾಗಿದ್ದಾರೆ. ಮಧ್ಯಾಹ್ನ 1.56ಕ್ಕೆ ಅಧಿಕೃತವಾಗಿ ಘೋಷಿಸಲಾಗಿದೆ. ಅದರೆ, ನಿಧನ ವಾರ್ತೆಯನ್ನು ವಿಳಂಬವಾಗಿ ಪ್ರಕಟಿಸಲು ಶ್ರೀಗಳ ಅಂತಿಮ ಇಚ್ಛೆಯೇ ಕಾರಣವೆಂದು ಹೇಳಲಾಗಿದೆ.
Breaking News: ಕೋಟ್ಯಂತರ ಭಕ್ತರ ತೊರೆದು ಶಿವನೆಡೆಗೆ ನಡೆದ 'ನಡೆದಾಡುವ ದೇವರು'
ಮಂಗಳವಾರ ಮಧ್ಯಾಹ್ನ 3 ಗಂಟೆ ತನಕ ಸಾರ್ವಜನಿಕ ದರ್ಶನಕ್ಕಾಗಿ ಸಿದ್ದಗಂಗಾ ಮಠದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಂಗಳವಾರದಂದೇ ವಿರಕ್ತ ಮಠದ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಲಿದೆ.
ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗಳ ಬದುಕಿನ ಹಾದಿ
ಅನ್ನದಾಸೋಹಕ್ಕೆ ಅಡ್ಡಿಯಾಗಬಾರದು: ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಹಲವು ದಶಕಗಳಿಂದ ನಿತ್ಯ ದಾಸೋಹ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ. ಊಟದ ಸಮಯಕ್ಕೂ ಮುನ್ನ ಶ್ರೀಗಳ ನಿಧನದ ಸುದ್ದಿ ತಿಳಿದು ಬಂದಿದೆ.
ಸೋಮವಾರ ಬೆಳಗ್ಗೆ 11.44ಕ್ಕೆ ಶಿವ ಸಾಯುಜ್ಯ ಹೊಂದಿದರೆ ಸಿದ್ದಗಂಗಾ ಶ್ರೀ?
ಆದರೆ, ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು, ಮಠಕ್ಕೆ ಹಸಿದು ಬಂದವರಿಗೆ ಮೊದಲಿಗೆ ಅನ್ನವನ್ನು ನೀಡಿ, ಅನ್ನ ದಾಸೋಹ ನೆರವೇರಿದ ಬಳಿಕವೇ ಲಿಂಗೈಕ್ಯರಾದ ಸುದ್ದಿಯನ್ನು ಬಹಿರಂಗಪಡಿಸಲಾಗಿದೆ. ಈ ಬಗ್ಗೆ ಶ್ರೀಗಳು ಮುಂಚಿತವಾಗಿ ಕಿರಿಯ ಸ್ವಾಮೀಜಿಗಳಾದ ಸಿದ್ದಲಿಂಗ ಸ್ವಾಮೀಜಿಗಳಿಗೆ ತಿಳಿಸಿದ್ದರಂತೆ, ಮಠಕ್ಕೆ ಬರುವ ಭಕ್ತರು ಹಸಿದುಕೊಂಡಿರಬಾರದು, ತಾವು ಲಿಂಗೈಕ್ಯರಾದರೂ ನಿತ್ಯ ಕಾಯಕಕ್ಕೆ ಅಡ್ಡಿಯುಂಟಾಗಬಾರದು ಎಂದು ಸೂಚನೆ ನೀಡಿದ್ದರಂತೆ. ಹೀಗಾಗಿ, ಶ್ರೀಗಳ ನಿಧನದ ವಾರ್ತೆಯನ್ನು ತಡವಾಗಿ ಘೋಷಿಸಿದ್ದಾರೆ.