ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುವ ಜನಾಂಗದಿಂದ ಕಲಿಯುವುದು ಸಾಕಷ್ಟಿದೆ: ಮೋದಿ

By Mahesh
|
Google Oneindia Kannada News

ತುಮಕೂರು, ಮಾರ್ಚ್ 04: 'ಅನಿವಾರ್ಯ ಕಾರಣಗಳಿಂದ ನಾನು ಇಂದು ನಿಮ್ಮ ಜತೆ ಅಲ್ಲಿ ಇರಲಾಗುತ್ತಿಲ್ಲ. ತಂತ್ರಜ್ಞಾನದ ಮೂಲಕ ನಿಮ್ಮ ಜತೆಗೆ ಮಾತನಾಡುತ್ತಿದ್ದೇನೆ.

ಯುವ ಜನಾಂಗದ ಜತೆ ಯಾವುದೇ ರೀತಿಯಲ್ಲಿ ಮಾತನಾಡುವುದು ಸಂಭ್ರಮದ ಕ್ಷಣ, ಹೊಸ ಹೊಸ ವಿಷಯಗಳನ್ನು ಕಲಿಯುವುದು ಸಾಕಷ್ಟಿರುತ್ತದೆ' ಎಂದು ಪ್ರಧಾನಿ ಮೋದಿ ಅವರು ವಿಡಿಯೋ ಭಾಷಣದಲ್ಲಿ ಹೇಳಿದರು.

PM Narendra Modi addresses a Youth Convention at Tumakuru

ರಾಮಕೃಷ್ಣ, ಶ್ರೀಶಾರದಾ ಮಾತೆ, ಸ್ವಾಮಿ ವಿವೇಕಾನಂದರ ತ್ರಿವೇಣಿ ಸಂಗಮವನ್ನು ಇಲ್ಲಿ ಕಾಣಬಹುದು. ಸಿದ್ದಗಂಗಾ ಮಠ, ಬಸವಣ್ಣರ ನಾಡಿನಲ್ಲಿ ಯುವ ಜನಾಂಗಕ್ಕೆ ಸಾಕಷ್ಟು ಮಾರ್ಗದರ್ಶಿಗಳು ಇದ್ದಾರೆ. ಆಧ್ಯಾತ್ಮ, ಸನ್ಮಾರ್ಗದಲ್ಲಿ ನಡೆಯಬೇಕಿದೆ ಎಂದರು.

Newest FirstOldest First
1:00 PM, 4 Mar

ನರೇಂದ್ರ ಮೋದಿ ಅಪ್ಲಿಕೇಷನ್ ನಲ್ಲಿ ನನ್ನ ಈ ಭಾಷಣದ ಮುಖ್ಯಾಂಶವನ್ನು ಕನ್ನಡದಲ್ಲಿ ನೀಡುವಂತೆ ನನ್ನ ತಂಡಕ್ಕೆ ಕೇಳುತ್ತೇನೆ.
1:00 PM, 4 Mar

ಶಿವಕುಮಾರ ಸ್ವಾಮೀಜಿಗಳ ಜತೆ ಕಳೆದ ಕ್ಷಣಗಳನ್ನು ಮರೆತ್ತಿಲ್ಲ. ಅವರು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿದ್ದಾರೆ. ನೆರದಿರುವ ಎಲ್ಲಾ ಪೂಜ್ಯ ಸ್ವಾಮೀಜಗಳಿಗೆ ನನ್ನ ಪ್ರಮಾಣಗಳು
12:58 PM, 4 Mar

ತುಮಕೂರಿನ ಸಾಧು ಸಂತರ ನಾಡಾಗಿದ್ದು, ನಿಮ್ಮೊಂದಿಗೆ ಮಾತನಾಡುವುದು ಸಂತಸ ತಂದಿದೆ.
12:55 PM, 4 Mar

ನಾನು ಇಂದು ಮಾತನಾಡಿದ ಕೆಲ ಕನ್ನಡ ವಾಕ್ಯಗಳನ್ನು ಕೇಳಿ ಆನಂದಿಸಿದ್ದೀರಿ. ಮೋದಿ ಅವರ ಮಾತಿನಲ್ಲಿ ವ್ಯಾಕರಣ ಸರಿಯಿತ್ತೇ? ಭಾಷಾ ಶೈಲಿ ಇತ್ತೇ? ಎಂಬುದನ್ನು ನೀವು ನೋಡುವುದಿಲ್ಲ. ನಮ್ಮ ಭಾಷೆಯಲ್ಲಿ ಮಾತನಾಡಿದರು ಎಂದು ಭಾವನಾತ್ಮಕವಾಗಿ ಒಂದಾಗುತ್ತಿರಿ.
12:54 PM, 4 Mar

ವಿದ್ಯಾರ್ಥಿ ದೆಸೆಯಲ್ಲಿ ಫ್ರೆಂಚ್, ಸ್ಪಾನೀಷ್ ಹೀಗೆ ಅನೇಕ ಭಾಷೆಗಳನ್ನು ಕಲಿಯುವ ಆಸೆ ಇರುತ್ತದೆ. ಇದರ ಜತೆಗೆ ನಮ್ಮ ದೇಶದಲ್ಲಿ ಸಾವಿರಾರು ಭಾಷೆ, ನುಡಿಗಟ್ಟುಗಳಿವೆ. ನಿಮ್ಮ ಇಷ್ಟ ಭಾಷೆ ಕಲಿತು, ಬೆಳೆಸಿರಿ
12:53 PM, 4 Mar

ಏಕ್ ಭಾರತ್ ಶ್ರೇಷ್ಠ್ ಭಾರತ್ ಎಂಬುದು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಕನಸು, ಭಾರತದ ಐಕ್ಯತೆಗಾಗಿ ಶ್ರಮಿಸಿದವರ ಕನಸು ನನಸಾಗಿಸೋಣ.
12:48 PM, 4 Mar

ವಿದ್ಯಾರ್ಥಿ ದೇವೋಭವ ಎಂಬ ಮಂತ್ರವನ್ನು ನಂಬಿರುವ ಸರ್ಕಾರ, ಯುವಶಕ್ತಿ ದೇವೋಭವ ಎಂಬ ನಂಬಿಕೆ ಇರಿಸಿಕೊಂಡಿದೆ.
Advertisement
12:48 PM, 4 Mar

ಖೇಲೋ ಇಂಡಿಯಾ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಮಾತನಾಡಿದ ಮೋದಿ, ಶಿಷ್ಯರನ್ನು ಕೈ ಹಿಡಿದು ನಡೆಸುವ ಕಾರ್ಯವನ್ನು ಗುರುಗಳು ಮಾಡುತ್ತಾರೆ. ಭಾರತದಲ್ಲಿನ ದೇಶಿ ಕ್ರೀಡೆಗಳಾದ ಕಬಡ್ಡಿ, ಖೋ ಖೋಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿಗಲು ಗುರುಗಳ ಪರಿಶ್ರಮವಿದೆ.
12:45 PM, 4 Mar

ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ಸರ್ಕಾರ ಕೈಗೊಂಡಿರುವ ಅನೇಕ ಯೋಜನೆಗಳು ಕರ್ನಾಟಕದ ಯುವ ಪ್ರತಿಭೆಗೂ ತಲುಪುತ್ತಿದೆ.
12:44 PM, 4 Mar

ದೇಶದಲ್ಲಿ 20 ಅತ್ಯಾಧುನಿಕ ನವನವೀನ ಕೌಶಲ್ಯ ವಿದ್ಯಾಸಂಸ್ಥೆ ನಿರ್ಮಾಣಕ್ಕೆ ಸರ್ಕಾರ ಸಂಕಲ್ಪ ಕೈಗೊಂಡಿದೆ.
12:40 PM, 4 Mar

ಯುವಶಕ್ತಿಯ ಕೌಶಲ್ಯ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲಾಯಿತು.
12:40 PM, 4 Mar

ಯವಶಕ್ತಿ ದೇಶದ ಭಾಗ್ಯ ಬದಲಾಯಿಸಬಲ್ಲದು, ಹೀಗಾಗಿ, ಯುವಶಕ್ತಿಯನ್ನು ರಾಷ್ಟ್ರ ನಿರ್ಮಾಣಕ್ಕಾಗಿ ಬಳಸಲು ಸರ್ಕಾರ ಸಾಕಷ್ಟು ಯೋಜನೆ ಹಾಕಿಕೊಂಡಿದೆ.
Advertisement
12:40 PM, 4 Mar

ಜೀವನದಲ್ಲಿ ಒಂದು ಗುರಿಯನ್ನು ಇಟ್ಟುಕೊಂಡು, ಗುರಿ ಸಾಧಿಸಲು ನಿಮ್ಮ ಏಕಾಗ್ರತೆ, ಸಮಯ ಎಲ್ಲವೂ ಗುರಿ ಸಾಧನೆಗೆ ಮುಡಿಪಿಡಿ ಎಂದು ಸ್ವಾಮಿ ವಿವೇಕಾನಾಂದ ಹೇಳಿದ್ದಾರೆ.
12:34 PM, 4 Mar

ದ್ವೇಷ ರಾಜಕಾರಣ ಬಿಟ್ಟು, ಐಕ್ಯತೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಅಲ್ಲಿನ ಮತದಾರರು ಸಾಬೀತು ಮಾಡಿದ್ದಾರೆ
12:33 PM, 4 Mar

ತ್ರಿಪುರಾದ ಆದಿವಾಸಿಗಳು, ಈಶಾನ್ಯದ ಬುಡಕಟ್ಟು ಜನಾಂಗದವರು ಮುಖ್ಯ ವಾಹಿನಿಗೆ ಕರೆ ತಂದು ಅವರ ಸಬಲಗೊಳಿಸಲು ಯುವ ಜನಾಂಗದ ನೆರವು ಸಿಕ್ಕಿತು.
12:31 PM, 4 Mar

ಈಶಾನ್ಯ ಭಾರತದಲ್ಲಿನ ಅಭಿವೃದ್ಧಿಗಾಗಿ ಶ್ರೀರಾಮಕೃಷ್ಣ ಆಶ್ರಮದಿಂದ ಸಾಕಷ್ಟು ಕಾರ್ಯಗಳನ್ನು ಮಾಡಿದೆ.

English summary
PM Narendra Modi addresses a Youth Convention held at Sri Ramakrishna Ashrama, Tumakuru via video conference call.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X