ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂ.ಬಿ.ಪಾಟೀಲರಿಗೆ ಡಿಸಿಎಂ ಸ್ಥಾನ ಕೊಡಲ್ಲ ಎಂದ ಕಾಂಗ್ರೆಸ್ ಸಚಿವ

By ಕುಮಾರಸ್ವಾಮಿ
|
Google Oneindia Kannada News

ತುಮಕೂರು, ಜೂನ್ 11: ಸಂಪುಟ ವಿಸ್ತರಣೆ ಬಗ್ಗೆ ಅತೃಪ್ತ ವ್ಯಕ್ತಪಡಿಸುತ್ತಿರುವ ಎಂ.ಬಿ.ಪಾಟೀಲರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡುವ ಪ್ರಶ್ನೆಯೇ ಇಲ್ಲ . ಇಂಥ ಎಂ.ಬಿ.ಪಾಟೀಲ್ ಅಂತವರು ಏನೇ ಮಾಡಿದರೂ ಈ ಮೈತ್ರಿ ಸರಕಾರಕ್ಕೆ ತೊಂದರೆ ಇಲ್ಲ. ಐದು ವಷ೯ಗಳ ಕಾಲ ಸರಕಾರ ಸುಭದ್ರವಾಗಿ ಇರಲಿದೆ ಎಂದು ಕಾಮಿ೯ಕ ಸಚಿವ ವೆಂಕಟರಮಣಪ್ಪ ಸೋಮವಾರ ತುಮಕೂರಿನಲ್ಲಿ ಹೇಳಿದರು.

ತುಮಕೂರಿನ ಕ್ಯಾತಸಂದ್ರದಲ್ಲಿ ಇರುವ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಹಳೇ ಮಠದಲ್ಲಿ ಶ್ರೀಗಳ ಆಶೀರ್ವಾದ ಪಡೆದ ವೆಂಕಟರಮಣಪ್ಪ ಮಾಧ್ಯಮ ಹೇಳಿಕೆ ನೀಡಿದರು. ಕಾರ್ಮಿಕ ಖಾತೆ ನನಗೆ ತೃಪ್ತಿ ತಂದಿದೆ. ಬಡವರಿಗೆ ಸಹಾಯ ಮಾಡುವ ಖಾತೆ ಇದು. ಹಾಗಾಗಿ ತೃಪ್ತಿ ತಂದಿದೆ. ಅಭಿವೃದ್ಧಿ ಎಂಬುದು ಖಾತೆಯಿಂದ ಮಾತ್ರವಲ್ಲ ಶಾಸಕನಾಗಿಯೂ ಮಾಡಬಹುದು ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಂಬಿ ಪಾಟೀಲ್, ಸತೀಶ್, ದಿನೇಶ್!ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಂಬಿ ಪಾಟೀಲ್, ಸತೀಶ್, ದಿನೇಶ್!

ಬರಪೀಡಿತ ತಾಲೂಕಾದ ಪಾವಗಡಕ್ಕೆ ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು. ಸಣ್ಣ ಕೈಗಾರಿಕೆಗಳು ಹಾಗೂ ಗಾರ್ಮೆಂಟ್ಸ್ ಸ್ಥಾಪಿಸಿ ಉದ್ಯೋಗ ಕೊಡುತ್ತೇವೆ ಇದರಿಂದ ನಿರುದ್ಯೋಗ ಸಮಸ್ಯೆ ನಿವಾರಣೆ ಆಗಲಿದೆ ಎಂದರು.

DCM post will not given to MB Patil, said minister Venkataramanappa

ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಲೆಗುಂಪಾಗಿಲ್ಲ. ಅವರೂ ನಮ್ಮ ನಾಯಕರೇ ಎಂದು ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

English summary
DCM post will not given to MB Patil in JDS- Congress coalition government, said minister Venkataramanappa in Tumakuru Siddaganga mutt on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X