ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಸಚಿವ ಚನ್ನಿಗಪ್ಪ ಮಗನ ಮನೆ ಮುಂದೆ ವಾಮಾಚಾರ

By ಕುಮಾರಸ್ವಾಮಿ
|
Google Oneindia Kannada News

ತುಮಕೂರು, ಏಪ್ರಿಲ್ 7 : ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಸಚಿವ ಚನ್ನಿಗಪ್ಪ ಅವರ ಮಗ ಡಿ.ಸಿ.ಗೌರಿಶಂಕರ್ ಮನೆ ಮುಂದೆ ವಾಮಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ನಾಗರಭಾವಿ ಒಂಬತ್ತನೇ ಹಂತದಲ್ಲಿರುವ ಡಿ.ಸಿ.ಗೌರಿಶಂಕರ್ ಮನೆ ಮುಂದೆ ವಾಮಾಚಾರ ನಡೆದಿದ್ದು, ಇದು ರಾಜಕೀಯ ವಿರೋಧಿಗಳು ಸೋಲಿನ ಭೀತಿಯಿಂದ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಮಾಟ ಮಾಡಿಸಿದಲ್ಲಿ ಕಂಡುಬರುವ ಲಕ್ಷಣಗಳು ಮತ್ತು ಪರಿಹಾರಮಾಟ ಮಾಡಿಸಿದಲ್ಲಿ ಕಂಡುಬರುವ ಲಕ್ಷಣಗಳು ಮತ್ತು ಪರಿಹಾರ

ಮನೆ ಮುಂದೆ ತಟ್ಟೆಯಲ್ಲಿ ಅನ್ನದಲ್ಲಿ ವಾಮಾಚಾರ ಮಾಡಿ, ಆ ಬಳಿಕ ಚಾಕುವಿಗೆ ಸುತ್ತಿ ಕರಪತ್ರ ಸಹ ಇಡಲಾಗಿದೆ. ಆ ಕರಪತ್ರದಲ್ಲಿ, "ನನ್ನ ಸಹವಾಸಕ್ಕೆ ಬರಬೇಡ. ನಿನ್ನ ಕುಟುಂಬವನ್ನು ಬೀದಿಪಾಲು ಮಾಡಿ, ನಿನ್ನ ಮಕ್ಕಳಿಂದ ಭಿಕ್ಷೆ ಎತ್ತಿಸುತ್ತೇನೆ" ಎಂಬ ಎಚ್ಚರಿಕೆ ಒಕ್ಕಣೆಯನ್ನು ಕರಪತ್ರದಲ್ಲಿ ಬರೆಯಲಾಗಿದೆ.

Black magic

ಬೆಂಗಳೂರಿನ ನಾಗರಭಾವಿ ನಿವಾಸದಲ್ಲಿ ಡಿ.ಸಿ.ಗೌರಿಶಂಕರ್ ಪತ್ನಿ ಹಾಗೂ ಇಬ್ಬರು ಮಕ್ಕಳು ವಾಸವಿದ್ದಾರೆ. ಈ ಘಟನೆಯಿಂದ ಡಿ.ಸಿ.ಗೌರಿಶಂಕರ್ ಸೇರಿದಂತೆ ಕುಟುಂಬಸ್ಥರು ಗಾಬರಿ ಆಗಿದ್ದಾರೆ.
English summary
Karnataka Assembly Elections 2018: Black magic in front of JDS Tumakuru rural constituency candidate DC Gowrishankar's Bengaluru house. Family of Gowrishankar panic about this incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X