ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರಿನ ಮಾಜಿ ಮೇಯರ್ ಗಡ್ಡ ರವಿ ಮರ್ಡರ್ ಕೇಸ್ ನಲ್ಲಿ ಒಂಬತ್ತು ಮಂದಿ ಬಂಧನ

By ತುಮಕೂರು ಪ್ರತಿನಿಧಿ
|
Google Oneindia Kannada News

ತುಮಕೂರು, ಅಕ್ಟೋಬರ್ 15: ಮಾಜಿ ಮೇಯರ್ ಗಡ್ಡ ರವಿ ಹತ್ಯೆ ಪ್ರಕರಣದಲ್ಲಿ ಒಂಬತ್ತು ಮಂದಿಯನ್ನು ತುಮಕೂರು ಪೊಲೀಸರು ವಶಕ್ಕೆ ಪಡೆದಿದ್ದು, ಕೃತ್ಯಕ್ಕೆ ಬಳಸಿದ್ದ ಆಯುಧ ಮತ್ತು ವಾಹನಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ. ಈ ವರೆಗೆ ವಶಕ್ಕೆ ಪಡೆದ ಆರೋಪಿಗಳ ವಿವರ ಹೀಗಿದೆ.

9 accused arrested in Tumakuru former mayor Ravikumar murder case

ತುಮಕೂರಿನ ಹನುಮಂತಪುರದ ಸುಜಯ್ ಭಾರ್ಗವ್ (32)

ತುಮಕೂರಿನ ಬಿದಿರುಮೆಳೆ ತೋಟದ ರಘು (37)

ತುಮಕೂರು ತಾಲೂಕು ಕುಂದೂರಿನ ಕೆ.ಆರ್.ರಾಜೇಶ್ (30)

ತುಮಕೂರು ಮಾಜಿ ಮೇಯರ್ ರವಿ ಕುಮಾರ್ ಹತ್ಯೆ ನಡೆದಿದ್ದು ಹೇಗೆ? ತುಮಕೂರು ಮಾಜಿ ಮೇಯರ್ ರವಿ ಕುಮಾರ್ ಹತ್ಯೆ ನಡೆದಿದ್ದು ಹೇಗೆ?

ತುಮಕೂರಿನ ದೇವರಾಯಪಟ್ಟಣದ ನವೀನ (37)

ಕೊರಟಗೆರೆಯ ಕೋಳಾಲದ ಕೆ.ಎಲ್.ದೇವರಾಜ (21)

ಬೆಂಗಳೂರಿನ ಬಸವೇಶ್ವರ ನಗರದ ರಘು (26)

ಬೆಂಗಳೂರಿನ ಲಗ್ಗೆರೆಯ ಜೋಮನ್ ವಿ. ಜಾರ್ಜ್ (27)

ತುಮಕೂರಿನ ಗಡ್ಡ ರವಿಯದು ನೂರಾರು ಕೋಟಿ ಸಾಮ್ರಾಜ್ಯವೆ? ಕೊಲೆಗೆ ಕಾರಣ? ತುಮಕೂರಿನ ಗಡ್ಡ ರವಿಯದು ನೂರಾರು ಕೋಟಿ ಸಾಮ್ರಾಜ್ಯವೆ? ಕೊಲೆಗೆ ಕಾರಣ?

ಮದ್ದೂರಿನ ಬೆಸಗರಹಳ್ಳಿಯ ಬಿ.ಎಂ.ಜಗದೀಶ್ (26)

ಮದ್ದೂರಿನ ವಳಗೇರಹಳ್ಳಿಯ ವಿ.ಎನ್.ಮಹೇಶ್ (30)

ಈ ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳು ತಲೆ ತಪ್ಪಿಸಿಕೊಂಡಿದ್ದು, ಅವರಿಗಾಗಿ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆಪ್ಟೆಂಬರ್ 30ರಂದು ತುಮಕೂರು ನಗರದ ಬಟವಾಡಿ ಸೇತುವೆ ಬಳಿ ಗಡ್ಡ ರವಿಯ ಹತ್ಯೆಯಾಗಿತ್ತು. ಆ ನಂತರ ಸುಜಯ್ ಹಾಗೂ ರಘು ಗೌರಿಬಿದನೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದರು.

English summary
Tumakuru police arrested 9 accused in former mayor and JDS leader Ravikumar murder case. Still some accused are missing. Investigation continued by police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X