ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈರಲ್ ವಿಡಿಯೋ: ಶ್ರೀಗಳು ನಮ್ಮನ್ನಗಲಿಲ್ಲ,ಇಂಥ ಮಕ್ಕಳಲ್ಲಿದ್ದಾರೆ ನೋಡಿ..!

|
Google Oneindia Kannada News

Recommended Video

Siddaganga Swamiji: ಇದೇ ನೋಡಿ, ಶ್ರೀಗಳು ಕಲಿಸಿದ ಸಂಸ್ಕಾರ | Oneindia Kannada

ತುಮಕೂರು, ಜನವರಿ 23: "ಅಣ್ಣಾ, ಅನ್ನ ವೇಸ್ಟ್ ಮಾಡ್ಬೇಡಿ ಪ್ಲೀಸ್, ಎಷ್ಟು ಬೇಕೋ ಅಷ್ಟೇ ಹಾಕ್ಕೊಂಡು ತಿನ್ನಿ..." ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪುಟ್ಟ ಹುಡುಗನೊಬ್ಬ ಮಠಕ್ಕೆ ಬಂದ ಭಕ್ತರಲ್ಲಿ ಈ ರೀತಿ ಮನವಿ ಮಾಡಿಕೊಳ್ಳುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದೆ.

ಗದ್ದುಗೆಯಲ್ಲಿ ಐಕ್ಯರಾದ ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳುಗದ್ದುಗೆಯಲ್ಲಿ ಐಕ್ಯರಾದ ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳು

ಎಷ್ಟೋ ಶಾಲೆಗಳು ಲಕ್ಷ ಲಕ್ಷ ಡೊನೇಶನ್ ತೆಗೆದುಕೊಂಡು ಶಿಕ್ಷಣ ನೀಡಬಹುದು, ಆದರೆ ಸಂಸ್ಕಾರ ನೀಡುವುದಕ್ಕೆ ಇಂಥ ಸೇವಾಮನೋಭಾವದ ಗುಡಿಯಂಥ ಶಾಲೆಯಲ್ಲಿ ಮಾತ್ರ ಸಾಧ್ಯ ಎಂಬುದಕ್ಕೆ ಈ ವಿಡಿಯೋಕ್ಕಿಂತ ಸಾಕ್ಷಿ ಬೇಕಿಲ್ಲ!

Viral Video: A boy from siddaganga mutt requesting people to not waste food

ಶ್ರೀಮಠದಲ್ಲಿ ನಿತ್ಯವೂ ಸಾವಿರಾರು ಜನರಿಗೆ ಉಚಿತ ಊಟ ಬಡಿಸುವ ಪರಿಪಾಠವನ್ನು ಮಠ ರೂಢಿಸಿಕೊಂಡು ಬಂದಿದೆ. ಈ ಜಗತ್ತಿನಲ್ಲಿ ಎಷ್ಟೋ ಜನ ಒಂದು ತುತ್ತಿಗಾಗಿ ಹಪಹಪಿಸುತ್ತಿರುವಾಗಲೂ ಅನ್ನದ ಮಹತ್ವ ಗೊತ್ತಿಲ್ಲದ ಹಲವರಿದ್ದಾರೆ. ಅಂಥವರಿಗೆ ಈ ಪುಟ್ಟ ಹುಡುಗನ ನಡೆ ಆದರ್ಶವೆಂದರೆ ತಪ್ಪಿಲ್ಲ.

ಸಿದ್ದಗಂಗಾ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದ ಎಚ್.ಡಿ.ಕುಮಾರಸ್ವಾಮಿ ಸಿದ್ದಗಂಗಾ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದ ಎಚ್.ಡಿ.ಕುಮಾರಸ್ವಾಮಿ

ಅನ್ನ ಬಿಟ್ಟು ತಟ್ಟೆಯನ್ನು ತಂದು ಡಸ್ಟ್ ಬಿನ್ ಗೆ ಹಾಕಲು ಬಿಡದೆ ಅದನ್ನು ಖಾಲಿಮಾಡುವಂತೆ ಆತ ಒತ್ತಾಯಿಸಿದ್ದಾನೆ. ಆ ತಟ್ಟೆ ಖಾಲಿಯಾಗುವವರೆಗೂ ಎಸೆಯಲು ಬಿಡದೆ ಪಟ್ಟು ಹಿಡಿದಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನ್ನದ ಮಹತ್ವವನ್ನು ಸಾರಿ ಹೇಳಿದೆ.

English summary
A video of a boy who is requesting people to not waste food in Siddaganga mutt in Tumakuru becomes viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X