ತುಮಕೂರು-ಶಿವಮೊಗ್ಗ 4 ಪಥದ ರಸ್ತೆ ಕಾಮಗಾರಿಗೆ ಸಿಗಲಿದೆ ವೇಗ
ತಮಕೂರು, ಏಪ್ರಿಲ್ 5; ಬಹುನಿರೀಕ್ಷಿತ ತುಮಕೂರು- ಶಿವಮೊಗ್ಗ ನಡುವಿನ ಚತುಷ್ಪಥ ರಸ್ತೆ ಕಾಮಗಾರಿ ವೇಗ ಪಡೆದುಕೊಳ್ಳಲಿದೆ. ಕೆಲವು ವರ್ಷಗಳ ಹಿಂದೆ ಆರಂಭವಾದ ನಾಲ್ಕು ಪಥದ ರಸ್ತೆ ಕಾಮಗಾರಿ ಭೂ ಸ್ವಾಧೀನದ ಕಾರಣದಿಂದ ಕುಂಟುತ್ತಾ ಸಾಗಿದೆ.
ರಾಷ್ಟ್ರೀಯ ಹೆದ್ದಾರಿ 206ರ ತುಮಕೂರು-ಶಿವಮೊಗ್ಗ ನಡುವಿನ ರಸ್ತೆ ಯೋಜನೆ ಕಾಮಗಾರಿಯನ್ನು ಭಾರತ್ ಮಾಲಾ ಯೋಜನೆಯಡಿಯಲ್ಲಿ ಕೈಗೊಳ್ಳಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಉಡುಪಿ; ಟೋಲ್ ಕಂಪನಿಗೆ ಸೆಡ್ಡು, ಉಚಿತ ರಸ್ತೆ ನಿರ್ಮಾಣ!
ಒಟ್ಟು 6397.47 ಕೋಟಿ ವೆಚ್ಚದ ಈ ಯೋಜನೆಯಿಂದಾಗಿ ಬೆಂಗಳೂರು ಮತ್ತು ಮಲೆನಾಡು ಭಾಗದ ಸಂಪರ್ಕ ಇನ್ನಷ್ಟು ಸುಗಮವಾಗಲಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಕುರಿತು ಟ್ವೀಟ್ ಮಾಡಿದ್ದಾರೆ.
ವಿವಾದ ಸುಖಾಂತ್ಯ; ರಸ್ತೆ ನಿರ್ಮಾಣ ಕೈ ಬಿಟ್ಟ ಯಶ್ ಕುಟುಂಬ
ನಾಲ್ಕು ಪಥರ ರಸ್ತೆ ಯೋಜನೆಗೆ ಭೂ ಸ್ವಾಧೀನ ಮಾಡಿಕೊಂಡು ಪರಿಹಾರ ಕೊಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿತ್ತು. ಆದರೆ, ಪರಿಹಾರದ ಮೊತ್ತ ಹೆಚ್ಚಾದ ಕಾರಣದಿಂದಾಗಿ ಆರ್ಥಿಕ ಸಮಸ್ಯೆ ಎದುರಾಯಿತು. ಇದರಿಂದಾಗಿ ಯೋಜನೆ ಕುಂಟುತ್ತಾ ಸಾಗಿದೆ.
ಸುರತ್ಕಲ್ ಟೋಲ್ ಗೇಟ್ ರದ್ದು; ಸಚಿವ ಗಡ್ಕರಿ ಭರವಸೆ
ತುಮಕೂರು- ಶಿವಮೊಗ್ಗ ಹೇಗಿದೆ ಯೋಜನೆ?
ಪ್ರಸ್ತುತ ಬೆಂಗಳೂರು-ನೆಲಮಂಗಲ ತನಕ 6 ಪಥದ ರಸ್ತೆ ಇದೆ. ನೆಲಮಂಗಲದಿಂದ ತುಮಕೂರು ಬೈಪಾಸ್ ತನಕ 4 ಪಥದ ರಸ್ತೆ ಇದೆ. ತುಮಕೂರು ಬೈಪಾಸ್ನಿಂದ ಶಿವಮೊಗ್ಗ ತನಕ ಎರಡು ಪಥದ ರಸ್ತೆ ಮಾತ್ರವಿದೆ. ಹೆಚ್ಚು ವಾಹನ ಸಂಚಾರ ಇರುವುದರಿಂದ ಈ ರಸ್ತೆ ಅಪಾಯಕಾರಿಯೂ ಹೌದು.
ರಸ್ತೆ ಕಾಮಗಾರಿಗೆ ವೇಗ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ತುಮಕೂರು-ಶಿವಮೊಗ್ಗ 4 ಪಥದ ರಸ್ತೆ ಯೋಜನೆಯನ್ನು ಹೈಬ್ರಿಡ್ ಆನ್ಯುಟಿ ಮಾಡೆಲ್ ಅನ್ವಯ ಭಾರತ್ ಮಾಲಾ ಯೋಜನೆಯಡಿ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಒಟ್ಟು 4 ಭಾಗವಾಗಿ ಯೋಜನೆಯನ್ನು ವಿಂಗಡಣೆ ಮಾಡಿ ಕಾಮಗಾರಿ ನಡೆಸಲಾಗುತ್ತದೆ.
ನಾಲ್ಕು ಭಾಗವಾಗಿ ಕಾಮಗಾರಿ
ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವಂತೆ ಮಲ್ಲಸಂದ್ರ-ಕರಾಡಿ (54 ಕಿ. ಮೀ.) ಯೋಜನೆಗೆ 1364 ಕೋಟಿ, ಕರಾಡಿ-ಬಾಣಾವರ (57 ಕಿ. ಮೀ.) ಯೋಜನೆಗೆ 1,505 ಕೋಟಿ, ಬಾಣಾವರ-ಬೆಟ್ಟದಹಳ್ಳಿ (48 ಕಿ. ಮೀ.) 1,444 ಕೋಟಿ ಮತ್ತು ಬೆಟ್ಟದಹಳ್ಳಿ-ಶಿವಮೊಗ್ಗ (57 ಕಿ. ಮೀ.) ಯೋಜನೆಗೆ 2082 ಕೋಟಿ ವೆಚ್ಚ ಮಾಡಲಾಗುತ್ತದೆ.
ಬಹಳ ವರ್ಷದ ಬೇಡಿಕೆ
ಶಿವಮೊಗ್ಗ-ತುಮಕೂರು ನಡುವಿನ ರಸ್ತೆ ಅಗಲೀಕರಣ ಹಲವು ವರ್ಷಗಳ ಬೇಡಿಕೆಯಾಗಿತ್ತು. ಈ ರಸ್ತೆ ಬೆಂಗಳೂರು-ಶಿವಮೊಗ್ಗಕ್ಕೆ ಮಾತ್ರ ಸಂಪರ್ಕ ಕಲ್ಪಿಸುವುದಿಲ್ಲ. ಶಿವಮೊಗ್ಗದ ಪ್ರವಾಸೋದ್ಯಮ ಅಭಿವೃದ್ಧಿ, ಹೊನ್ನಾವರ ಮತ್ತು ಗೋವಾ ತನಕ ಸಂಚಾರ ನಡೆಸಲು ಅನುಕೂಲವಾಗಲಿದೆ.