ಪಕ್ಕದ ಮನೆ ನಾಯಿ ಬಂದಿದ್ದಕ್ಕೆ ಜಗಳ; ತಿಪಟೂರಿನ ಮೂವರಿಗೆ ಗಂಭೀರ ಗಾಯ
ತುಮಕೂರು, ಸೆಪ್ಟೆಂಬರ್ 16: ಪಕ್ಕದ ಮನೆ ನಾಯಿ ತಮ್ಮ ಮನೆಗೆ ಬಂದಿತೆಂದು ಎರಡು ಕುಟುಂಬಗಳ ನಡುವೆ ಜಗಳ ನಡೆದಿದ್ದು, ಇದರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಬೀದಿಬದಿಯ ಹೆಣ್ಣುನಾಯಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಯುವಕನ ಬಂಧನ
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಮಣಕಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಿವಕುಮಾರಸ್ವಾಮಿ ಎಂಬುವರ ಸಾಕುನಾಯಿ ಪಕ್ಕದ ಮನೆಗೆ ಹೋಗಿತ್ತು. ಈ ವಿಚಾರವಾಗಿ ಪಕ್ಕದ ಮನೆಯವರಾದ ವರುಣ್ ಹಾಗೂ ಕರ್ಣ ಎಂಬುವರು ಶಿವಕುಮಾರ ಅವರ ಮೇಲೆ ಜಗಳಕ್ಕೆ ಹೋದರು.
ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕಾಂಪೌಂಡ್ ಒಳಗೆ ನುಗ್ಗಿ ನಾಯಿ ಹೊತ್ತೊಯ್ದ ಚಿರತೆ ದೃಶ್ಯ
ನಂತರ ಇದೇ ವಿಚಾರಕ್ಕೆ ವಾಗ್ವಾದ ಮುಂದುವರೆದು ಶಿವಕುಮಾರ್, ಅವರ ತಾಯಿ ಸತ್ಯ ಪ್ರೇಮ, ಪತ್ನಿ ರೇಖಾ ಮೇಲೆ ಕಬ್ಬಿಣದ ಪೈಪಿನಿಂದ ಹಲ್ಲೆ ಮಾಡಲಾಗಿದೆ. ಇದರಿಂದ ಈ ಮೂವರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಶಿವಕುಮಾರ್ ಸ್ವಾಮಿ ಕುಟುಂಬದವರನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.