ವಿಡಿಯೋ: ಶಿರಾದ ಕಳ್ಳಂಬೆಳ್ಳ ಪೊಲೀಸ್ ಠಾಣೆ ಬಳಿ ಆತ್ಮಗಳ ವಾಕಿಂಗ್
ಶಿರಾ (ತುಮಕೂರು ಜಿಲ್ಲೆ), ಮಾರ್ಚ್ 17: ಆತ್ಮಗಳು, ದೆವ್ವ- ಭೂತ ಇವುಗಳೆಲ್ಲ ಇವೆಯೋ ಇಲ್ಲವೋ ಎಂಬುದು ಚರ್ಚೆಗೆ ನಿಲುಕದ- ಉತ್ತರ ಸಿಗದ ಪ್ರಶ್ನೆಗಳು. ಅಯಾ ವ್ಯಕ್ತಿಯ ಅನುಭವಕ್ಕೆ ತಕ್ಕಂತೆ ಈ ಬಗ್ಗೆ ವ್ಯಾಖ್ಯಾನ ನೀಡುತ್ತಾರೆ. ಯಾವುದೇ ನಂಬಿಕೆಯನ್ನು ಪ್ರೋತ್ಸಾಹಿಸುವುದು ಅಥವಾ ಮೌಢ್ಯಕ್ಕೆ ಉತ್ತೇಜನ ನೀಡುವುದು ಈ ವರದಿಯ ಉದ್ದೇಶ ಇಲ್ಲ.
ಭಟ್ಕಳ ಪುರಸಭೆಯಲ್ಲಿ ದೆವ್ವದ ಕಾಟ, ದೇವರ ಮೊರೆ ಹೋದ ಅಧಿಕಾರಿಗಳು
ಆದರೆ, ಹೀಗೊಂದು ಬೆಳವಣಿಗೆ ಆಗುತ್ತಿದೆ ಎಂದು ಮಾಹಿತಿ ನೀಡುವುದಷ್ಟನ್ನೇ ಮಾಡುತ್ತಿದ್ದೇವೆ. ಆತ್ಮಗಳು ಪೊಲೀಸ್ ಠಾಣೆಗೆ ಬರುತ್ತಿವೆ. ಅದು ಕೂಡ ಒಂದು ಸಿಸಿಟಿವಿ ಕ್ಯಾಮೆರಾದಲ್ಲಿ ಮಾತ್ರ ಆ ದೃಶ್ಯಗಳು ಸೆರೆ ಆಗುತ್ತಿವೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಈ ದೃಶ್ಯಗಳನ್ನು ನೋಡಿ, ಪೊಲೀಸರು ಹೆದರುತ್ತಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಪೊಲೀಸ್ ಠಾಣೆಯ ಮುಂಭಾಗ ಬಾಗಿಲು ಬಳಿ ಆತ್ಮಗಳು ಬಂದು ಹೋಗುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದ್ದು, ಆ ದೃಶ್ಯಗಳು ಈಗ ವೈರಲ್ ಆಗಿವೆ. ಶಿರಾದ ಕಳ್ಳಂಬೆಳ್ಳ ಬಳಿ ಆದ ಅಪಘಾತವೊಂದರಲ್ಲಿ ಮೃತಪಟ್ಟವರ ಆತ್ಮವೇ ಇದು ಎಂದು ಕೂಡ ವಿಡಿಯೋದಲ್ಲಿ ಮಾತನಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲೇ ಶಿರಾ ತಾಲೂಕಿನ ಕಳಂಬೆಳ್ಳ ಪೊಲೀಸ್ ಠಾಣೆ ಇದೆ.