ಮಠ ಮಾನ್ಯಗಳು ಮುಜರಾಯಿ ವ್ಯಾಪ್ತಿಗೆ: ಸೊಗಡು ಶಿವಣ್ಣ ವಿರೋಧ
ತುಮಕೂರು, ಫೆಬ್ರವರಿ 08 : ಮಠ ಮಾನ್ಯಗಳನ್ನು ಧಾರ್ಮಿಕ ದತ್ತಿ ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳಲು ಹೊರಟಿರುವ ಸರ್ಕಾರದ ಕ್ರಮಕ್ಕೆ ಮಾಜಿ ಸಚಿವ ಸೊಗಡು ಶಿವಣ್ಣ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮಠ ಮಾನ್ಯಗಳನ್ನು ಧಾರ್ಮಿಕ ದತ್ತಿ ಕಾಯಿದೆಗೆ ಒಳಪಡಿಸಲು ಸಾಧ್ಯವಿಲ್ಲ. ಮಠಗಳಿಗೆ ತನ್ನದೇ ಆದ ಅಸ್ತಿತ್ವ, ಸ್ವಾತಂತ್ರ್ಯ, ಆಚಾರ ವಿಚಾರಗಳಿವೆ. ಹಾಗಾಗಿ ಒಂದೇ ತೆಕ್ಕೆಗೆ ತರಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಎಲ್ಲಾ ಮಠಗಳನ್ನು ಭಿಕ್ಷೆ ಕಟ್ಟಲಾಗಿದೆ.
ಜಾವಡೇಕರ್ ಬಂದು ಹೋದ ಮೇಲೆ ಬದಲಾಯಿತು ತುಮಕೂರು ಬಿಜೆಪಿ ಹವಾಮಾನ
ಧರ್ಮಕ್ಕಾಗಿ ಸಮಾಜಕ್ಕಾಗಿ ಭಿಕ್ಷೆ ಎತ್ತಿ ಮಠವನ್ನು ನಿರ್ಮಿಸಲಾಗಿದೆ. ಸಿದ್ದಗಂಗಾ ಮಠದ ತ್ರಿವಿಧ ದಾಸೋಹ ನೋಡಿ ಸರ್ಕಾರ ಇಂದಿರಾ ಕ್ಯಾಂಟೀನ್ ತೆರೆದಿದೆ. ಈ ನಡುವೆ ಮಠಗಳನ್ನು ಕಾಯಿದೆ ಅಡಿ ತರಲು ಹೊರಟಿರುವುದು ಶೋಚನೀಯ ಇದರಿಂದ ಜನ ದಂಗೆ ಏಳುವುದು ನಿಶ್ಚಿತ, ಉಳಿದ 90 ದಿನದಲ್ಲಿ ಈ ಸರ್ಕಾರ ಬಹಳ ಆಟವಾಡುತ್ತಿದೆ.
೧೯೭೫ರಲ್ಲಿ ವಾಕ್ ಸ್ವಾತಂತ್ರ್ಯ ಹಾಳು ಮಾಡಿ ಸರ್ಕಾರ ಸರ್ವನಾಶ ಆಗಿತ್ತು, ಇಂದು ಧರ್ಮ ದತ್ತಿಗೆ ಕೈಹಾಕಿ ಸರ್ವನಾಶ ಆಗುತ್ತಾರೆ. ಸಿದ್ದರಾಮಯ್ಯ ಒಬ್ಬ ಸರ್ವಾಧಿಕಾರಿ, ಹಿಂದೂಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಜನರು ತಿರುಗಿ ಬೀಳುವುದರ ಒಳಗೆ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.