ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಣ ಪಡೆದು ಟಿಕೆಟ್ ಕೊಡಿಸಿದ್ದಾರೆ ಸಂಸದ ಮುದ್ದಹನುಮೇಗೌಡ: ಆರೋಪ

By Manjunatha
|
Google Oneindia Kannada News

Recommended Video

ತುಮಕೂರು : ಸಂಸದ ಮುದ್ದ ಹನುಮೇಗೌಡ ವಿರುದ್ದ ಗಂಭೀರ ಆರೋಪ | Oneindia Kannada

ತುಮಕೂರು, ಏಪ್ರಿಲ್ 18: ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಂಚಿತ ಹೊನ್ನಗಿರಿಗೌಡ ಅವರು ಸಂಸದ ಮುದ್ದಹನುಮೇಗೌಡ ಅವರ ಮೇಲೆ ಲಂಚ ಪಡೆದ ಆರೋಪ ಹೊರಿಸಿದ್ದಾರೆ.

ಕೈ ತಪ್ಪಿದ ಸಾಗರದ ಟಿಕೆಟ್, ಕಣ್ಣೀರಿಟ್ಟ ಬೇಳೂರು ಗೋಪಾಲಕೃಷ್ಣ!ಕೈ ತಪ್ಪಿದ ಸಾಗರದ ಟಿಕೆಟ್, ಕಣ್ಣೀರಿಟ್ಟ ಬೇಳೂರು ಗೋಪಾಲಕೃಷ್ಣ!

ತಮಗೆ ಗುಬ್ಬಿ ಕ್ಷೇತ್ರದ ಟಿಕೆಟ್ ತಪ್ಪಲು ಸಂಸದ ಮುದ್ದಹನುಮೇಗೌಡ ಅವರೇ ಕಾರಣ ಎಂದಿರುವ ಹೊನ್ನಗಿರಿಗೌಡ. ಮುದ್ದಹನುಮೇಗೌಡ ಅವರು ಹಣ ಪಡೆದು ಕೆ.ಕುಮಾರ್ ಅವರಿಗೆ ಗುಬ್ಬಿ ಕ್ಷೇತ್ರದ ಟಿಕೆಟ್ ಕೊಡಿಸಿದ್ದಾರೆ ಎಂದಿದ್ದಾರೆ.

Karnataka elections: Gubbi congress ticket aspirant alleged on MP Muddahanumegowda

ಮುದ್ದಹನಮೇಗೌಡರು ಹಣ ಪಡೆದು ಟಿಕೆಟ್ ಕೊಡಿಸಿದ್ದಾರೆ ಎಂದು ನಾನು ಧರ್ಮಸ್ಥಳದಲ್ಲಿ ಪ್ರಮಾಣ ಮಾಡುತ್ತೇನೆ. ಅವರೂ ಪ್ರಮಾಣ ಮಾಡಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆದಿರುವ ಕೆ.ಕುಮಾರ್ ಅವರು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದು ಮೂರು ತಿಂಗಳು ಆಗಿದೆಯಷ್ಟೆ ಅಷ್ಟರಲ್ಲೇ ಅವರಿಗೆ ಟಿಕೆಟ್ ಕರುಣಿಸಲಾಗಿದೆ. ಅವರು ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಬಂದಿರುವುದು ಕಾಂಗ್ರೆಸ್‌ ಅನ್ನು ಮುಗಿಸಲು ಎಂದು ಅವರು ಕಿಡಿಕಾರಿದರು.

ಸಂಸದ ಮುದ್ದಹನುಮೇಗೌಡ ಅವರ ಈ ನಡೆಯಿಂದ ನಾನೂ ಸೇರಿದಂತೆ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಕಾಂಗ್ರೆಸ್‌ಗಾಗಿ ದುಡಿದ ಕಾರ್ಯಕರ್ತರಿಗೆ ಅನ್ಯಾಯವಾಗಿದೆ ಎಂದು ಅವರು ಹೇಳಿದರು.

English summary
Gubbi contituency congress ticket aspirant Honnagiri Gowda alleged that MP Muddahanume gowda taken bribe to give Gubbi congress ticket to Kumar. Kumar is recently joined congress by left jds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X