ಹಣ ಪಡೆದು ಟಿಕೆಟ್ ಕೊಡಿಸಿದ್ದಾರೆ ಸಂಸದ ಮುದ್ದಹನುಮೇಗೌಡ: ಆರೋಪ
Recommended Video
ತುಮಕೂರು, ಏಪ್ರಿಲ್ 18: ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಂಚಿತ ಹೊನ್ನಗಿರಿಗೌಡ ಅವರು ಸಂಸದ ಮುದ್ದಹನುಮೇಗೌಡ ಅವರ ಮೇಲೆ ಲಂಚ ಪಡೆದ ಆರೋಪ ಹೊರಿಸಿದ್ದಾರೆ.
ಕೈ ತಪ್ಪಿದ ಸಾಗರದ ಟಿಕೆಟ್, ಕಣ್ಣೀರಿಟ್ಟ ಬೇಳೂರು ಗೋಪಾಲಕೃಷ್ಣ!
ತಮಗೆ ಗುಬ್ಬಿ ಕ್ಷೇತ್ರದ ಟಿಕೆಟ್ ತಪ್ಪಲು ಸಂಸದ ಮುದ್ದಹನುಮೇಗೌಡ ಅವರೇ ಕಾರಣ ಎಂದಿರುವ ಹೊನ್ನಗಿರಿಗೌಡ. ಮುದ್ದಹನುಮೇಗೌಡ ಅವರು ಹಣ ಪಡೆದು ಕೆ.ಕುಮಾರ್ ಅವರಿಗೆ ಗುಬ್ಬಿ ಕ್ಷೇತ್ರದ ಟಿಕೆಟ್ ಕೊಡಿಸಿದ್ದಾರೆ ಎಂದಿದ್ದಾರೆ.
ಮುದ್ದಹನಮೇಗೌಡರು ಹಣ ಪಡೆದು ಟಿಕೆಟ್ ಕೊಡಿಸಿದ್ದಾರೆ ಎಂದು ನಾನು ಧರ್ಮಸ್ಥಳದಲ್ಲಿ ಪ್ರಮಾಣ ಮಾಡುತ್ತೇನೆ. ಅವರೂ ಪ್ರಮಾಣ ಮಾಡಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆದಿರುವ ಕೆ.ಕುಮಾರ್ ಅವರು ಜೆಡಿಎಸ್ನಿಂದ ಕಾಂಗ್ರೆಸ್ಗೆ ಬಂದು ಮೂರು ತಿಂಗಳು ಆಗಿದೆಯಷ್ಟೆ ಅಷ್ಟರಲ್ಲೇ ಅವರಿಗೆ ಟಿಕೆಟ್ ಕರುಣಿಸಲಾಗಿದೆ. ಅವರು ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಬಂದಿರುವುದು ಕಾಂಗ್ರೆಸ್ ಅನ್ನು ಮುಗಿಸಲು ಎಂದು ಅವರು ಕಿಡಿಕಾರಿದರು.
ಸಂಸದ ಮುದ್ದಹನುಮೇಗೌಡ ಅವರ ಈ ನಡೆಯಿಂದ ನಾನೂ ಸೇರಿದಂತೆ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಕಾಂಗ್ರೆಸ್ಗಾಗಿ ದುಡಿದ ಕಾರ್ಯಕರ್ತರಿಗೆ ಅನ್ಯಾಯವಾಗಿದೆ ಎಂದು ಅವರು ಹೇಳಿದರು.