ತುಮಕೂರು ; ಕಾಂಗ್ರೆಸ್ ಮುಖಂಡನ ಮನೆ ಮೇಲೆ ಐಟಿ ದಾಳಿ
ತುಮಕೂರು, ಫೆಬ್ರವರಿ 04: ಕಾಂಗ್ರೆಸ್ ಮುಖಂಡನ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಧಿಕಾರಿಗಳ ತಂಡ ವಿವಿಧ ದಾಖಲೆಗಳ ಪರಿಶೀಲನೆಯನ್ನು ನಡೆಸಿ ವಾಪಸ್ ಆಗಿದೆ.
ತುಮಕೂರಿನ ಕಾಂಗ್ರೆಸ್ ಮುಖಂಡ ರಾಯಸಂದ್ರ ರವಿಕುಮಾರ್ ಮನೆ ಮೇಲೆ ದಾಳಿ ನಡೆದಿದೆ. ರವಿ ಕುಮಾರ್ ಮಾಜಿ ಸಂಸದ ಮುದ್ದಹನುಮೇಗೌಡ, ಮಾಜಿ ಸಚಿವ ಡಾ. ಜಿ. ಪರಮೇಶ್ವರ ಅವರ ಆಪ್ತರು.
ಕೊನೆಯಾಯ್ತು ಐಟಿ ರೈಡ್; ರಶ್ಮಿಕಾ ಮನೆಯಿಂದ 4 ಬಾಕ್ಸ್ ದಾಖಲೆ ಸಂಗ್ರಹ
5ಕ್ಕೂ ಹೆಚ್ಚು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತುಮಕೂರಿನ ಎಸ್ಐಟಿ ಬ್ಯಾಕ್ ಗೇಟ್ನಲ್ಲಿರುವ ರವಿ ಕುಮಾರ್ ನಿವಾಸದ ಮೇಲೆ ಸೋಮವಾರ ದಾಳಿ ನಡೆಸಿದ್ದರು. ವಿವಿಧ ದಾಖಲೆಗಳನ್ನು ಪರಿಶೀಲಿಸಿದರು.
ದಿನಕ್ಕೆ 300 ಸಂಪಾದಿಸುವನಿಗೆ ಒಂದು ಕೋಟಿ ದಂಡ ಹಾಕಿದ ಐಟಿ ಇಲಾಖೆ
ಸೋಮವಾರ ರಾತ್ರಿ 11ಗಂಟೆ ತನಕ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ರವಿಕುಮಾರ್ ಗುತ್ತಿಗೆದಾರರು ಆಗಿದ್ದು, ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ.
ಸಂಬಳದಾರರ ತಲೆಗೆ ಹುಳ ಬಿಟ್ಟ ನಿರ್ಮಲಾ ತೆರಿಗೆ ಲೆಕ್ಕಾಚಾರ!
ತುಮಕೂರಿನ ರವಿ ಕುಮಾರ್ ನಿವಾಸ ಮಾತ್ರವಲ್ಲ. ತುರುವೇಕೆರೆ ತಾಲೂಕಿನ ರಾಯಸಂದ್ರದಲ್ಲಿರುವ ನಿವಾಸ. ರವಿಕುಮಾರ್ ಸಹೋದರಿ ನಿವಾಸದ ಮೇಲೆಯೂ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ರಾಯಸಂದ್ರ ರವಿ ಕಳೆದ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿದು ಸೋಲು ಅನುಭವಿಸಿದ್ದರು. ಅನಾಮಧೇಯ ದೂರಿನ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.