ಹೈಕಮಾಂಡ್ ಆದೇಶ ಪಾಲಿಸಿದ್ದೇನೆ ದುರಂತ ನಾಯಕನಾಗಿ ಇರುತ್ತೇನೆ:ಮುದ್ದಹನುಮೇಗೌಡ
Recommended Video
Lok
Sabha
Elections
2019:
ತುಮಕೂರು
ಕ್ಷೇತ್ರ
ಪಡೆದುಕೊಂಡ
ದೇವೇಗೌಡ್ರು...
ತುಮಕೂರು, ಏಪ್ರಿಲ್ 10: ಐದು ವರ್ಷಗಳ ಕಾಲ ಉತ್ತಮ ಆಡಳಿತ ನಡೆಸಿದರೂ ಸಹ ಟಿಕೆಟ್ ಸಿಗಲಿಲ್ಲ ಎಂದು ಮುದ್ದಹನುಮೇಗೌಡ ಅವರು ಪ್ರಚಾರ ಸಭೆಯೊಂದರಲ್ಲಿ ಹೇಳಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ರಾಷ್ಟ್ರದ ಹಿತದೃಷ್ಠಿಯಿಂದ ಕ್ಷೇತ್ರ ಬಿಟ್ಟುಕೊಡುವಂತೆ ಹೈಕಮಾಂಡ್ ಹೇಳಿತು, ಅದರಂತೆ ಕ್ಷೇತ್ರ ಬಿಟ್ಟುಕೊಟ್ಟಿದ್ದೇನೆ, ರಾಜಕೀಯ ದುರಂತ ನಾಯಕನಾಗಿ ಇದ್ದುಬಿಡುತ್ತೇನೆ ಎಂದು ನೋವಿನಿಂದ ನುಡಿದಿದ್ದಾರೆ ಮುದ್ದಹನುಮೇಗೌಡರು.
ದೇವೇಗೌಡರ ದೋಸ್ತಿಗಾಗಿ ಮುದ್ದಹನುಮೇಗೌಡರನ್ನೇ ಕಚಕ್ ಮಾಡಿದರೆ ಪರಂ!
ಮೈತ್ರಿ ಅಭ್ಯರ್ಥಿಯ ಪರ ಪ್ರಚಾರ ನಡೆಸಿದ ಅವರು, ಕೈ ಶುದ್ಧವಾಗಿಟ್ಟುಕೊಂಡೇ ನನ್ನ ಕ್ಷೇತ್ರವನ್ನು ಬಿಟ್ಟುಕೊಂಡಿದ್ದೇನೆ, ಮಾಧ್ಯಮಗಳಲ್ಲಿ ಬಂದ ವರದಿಗಳು ಸತ್ಯಕ್ಕೆ ದೂರವಾದವು ಎಂದು ಹೇಳಿದರು.
ನನಗೆ ಟಿಕೆಟ್ ಕೈತಪ್ಪಿದ್ದಕ್ಕೆ ಕೆಲವು ವಿಕೃತ ಮನಸ್ಸುಗಳು ಸಂಭ್ರಮಿಸಿರಬಹುದು ಆದರೆ ನಾನು ದುರಂತ ನಾಯಕನಾಗಿ ಇರುತ್ತೇನೆಯೇ ಹೊರತು ಪಕ್ಷಕ್ಕೆ ದ್ರೋಹ ಎಸಗುವುದಿಲ್ಲ ಎಂದು ಹೇಳಿದರು.
Comments
English summary
Tumakuru congress leader Muddahanume Gowda said I will remain as tragic hero of politics. He miss the MP election ticket for giving chance to Deve Gowda.
Story first published: Thursday, April 11, 2019, 0:06 [IST]