ನಾನೂ ಸಚಿವ ಸ್ಥಾನ ಆಕಾಂಕ್ಷಿ: ಸಂಸದ ಬಸವರಾಜು
ತುಮಕೂರು, ಮೇ 30: ಕರ್ನಾಟಕದಿಂದ ಆಯ್ಕೆ ಆಗಿರುವ ಇಪ್ಪತೈದು ಬಿಜೆಪಿ ಸಂಸದರಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿರುವಾಗ ನಾನೂ ಕೂಡ ಸಚಿವ ಸ್ಥಾನ ಆಕಾಂಕ್ಷಿ ಎಂದು ತುಮಕೂರು ಸಂಸದ ಜಿ.ಎಸ್.ಬಸವರಾಜು ಹೇಳಿದ್ದಾರೆ.
ತುಮಕೂರಿನಲ್ಲಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರನ್ನೇ ಸೋಲಿಸಿರುವ ಜಿ.ಎಸ್.ಬಸವರಾಜು ತಮಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಮೋದಿ ಜತೆ ಇಂದು 50-60 ಸಚಿವರ ಪ್ರಮಾಣವಚನ ಸಾಧ್ಯತೆ
ಜಿದ್ದಾ-ಜಿದ್ದಿನ ಕ್ಷೇತ್ರವಾಗಿದ್ದ ತುಮಕೂರಿನಲ್ಲಿ ದೇವೇಗೌಡ ಅವರು ಕಾಂಗ್ರೆಸ್ನ ಬೆಂಬಲದೊಂದಿಗೆ ಸ್ಪರ್ಧಿಸಿದ್ದರು. ಬಿಜೆಪಿ ಇಲ್ಲ ಗೆಲ್ಲುವ ನಿರೀಕ್ಷೆ ಇರಲಿಲ್ಲ ಅಂತಹುದರಲ್ಲಿ ಬಸವರಾಜು ಅವರು ಗೆದ್ದು ದೈತ್ಯ ಸಂಹಾರಿ ಎನಿಸಿಕೊಂಡಿದ್ದಾರೆ.
ದೊಡ್ಡ ವ್ಯಕ್ತಿಯನ್ನು ಸೋಲಿಸಿರುವ ತಮಗೆ ಸಚಿವ ಸ್ಥಾನ ನೀಡಬೇಕು ಎಂಬುದು ಬಸವರಾಜು ಅವರ ಒತ್ತಾಯವಾಗಿದೆ. ಆದರೆ ಖಂಡಿತ ತಮಗೆ ಸಚಿವ ಸ್ಥಾನ ಸಿಗುತ್ತೆ ಎಂಬ ನಂಬಿಕೆ ಇಲ್ಲವೆಂದು ಬಸವರಾಜು ಅವರು ಹೇಳಿದ್ದಾರೆ.
ಮೋದಿ ಸಂಪುಟಕ್ಕೆ ಯಾರು ಇನ್ ಯಾರು ಔಟ್?
ನನಗೆ ವೈಯಕ್ತಿಕವಾಗಿ ಇಲ್ಲಿಯವರೆಗೆ ಮಾಹಿತಿ ಬಂದಿಲ್ಲ, ಸಚಿವ ಸ್ಥಾನ ಸಿಗದಿದ್ದರೆ ಬೇಸರವೇನೂ ಇಲ್ಲ. ಬಿಜೆಪಿಯಲ್ಲಿ ಶಿಸ್ತಿದೆ ಅದಕ್ಕೆ ತಕ್ಕಂತೆ ನಾವುಗಳೂ ಇದ್ದೇವೆ, ಕಾಂಗ್ರೆಸ್ನಲ್ಲಿ ಶಿಸ್ತಿಲ್ಲ ಹಾಗಾಗಿ ಅವರು ಕಿತ್ತಾಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.