ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯ ವಶಕ್ಕೆ ತಡೆಯಾಜ್ಞೆ
ತುಮಕೂರು, ಸೆ.15 : ತುಮಕೂರಿನ ಪ್ರಸಿದ್ಧ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯವನ್ನು ವಶಕ್ಕೆ ಪಡೆದಿರುವ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ದೇವಾಲಯದಲ್ಲಿ ನಡೆದ ಅವ್ಯವಹಾರದ ಆರೋಪದ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ದೇವಾಲಯವನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು.
ದೇವಾಲಯವನ್ನು
ಸರ್ಕಾರದ
ವಶಕ್ಕೆ
ಪಡೆದ
ತೀರ್ಮಾನವನ್ನು
ಪ್ರಶ್ನಿಸಿ
ದೇವಾಲಯದ
ಆಡಳಿತ
ಮಂಡಳಿ
ಹೈಕೋರ್ಟ್ಗೆ
ರಿಟ್
ಅರ್ಜಿ
ಸಲ್ಲಿಸಿತ್ತು.
ಅರ್ಜಿಯ
ವಿಚಾರಣೆ
ನಡೆಸಿದ
ಕೋರ್ಟ್,
ಮಂಗಳವಾರ
ದೇವಾಲಯವನ್ನು
ವಶಪಡಿಸಿಕೊಂಡ
ಆದೇಶಕ್ಕೆ
ತಡೆಯಾಜ್ಞೆ
ನೀಡಿದೆ.
[5
ವರ್ಷಗಳ
ಕಾಲ
ಗೊರವನಹಳ್ಳಿ
ದೇಗುಲ
ಸರ್ಕಾರದ
ವಶಕ್ಕೆ]
2015ರ ಮಾರ್ಚ್ನಲ್ಲಿ ದೇವಾಲಯದಲ್ಲಿ ಅವ್ಯವಹಾರದ ಆರೋಪ ಕೇಳಿಬಂದಿತ್ತು. ಭಕ್ತರು ದೇವಾಲಯಕ್ಕೆ ಬೀಗ ಹಾಕಿ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. ನಂತರ ಮುಜರಾಯಿ ಇಲಾಖೆ ದೇವಾಲಯದ ಹುಂಡಿ ಎಣಿಕೆ ಕಾರ್ಯವನ್ನು ಮಾಡಿತ್ತು. ದೇವಾಲಯವನ್ನು ವಶಕ್ಕೆ ತೆಗೆದುಕೊಂಡಿತ್ತು. [ಗೊರವನಹಳ್ಳಿ ಮಹಾಲಕ್ಷ್ಮೀ ದೇವಿ ಪ್ರಸಿದ್ಧಿ ಪಡೆದಿದ್ದು ಹೇಗೆ?]
ಸೆಪ್ಟೆಂಬರ್ 5ರಂದು ತುಮಕೂರಿನಲ್ಲಿ ಮಾತನಾಡಿದ್ದ ಮುಜರಾಯಿ ಸಚಿವ ಟಿ.ಬಿ.ಜಯಚಂದ್ರ ಅವರು, 'ಗೊರವನಹಳ್ಳಿ ದೇವಾಲಯವನ್ನು ಸರ್ಕಾರ ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆದುಕೊಂಡಿದೆ. 5 ವರ್ಷಗಳ ಕಾಲ ದೇವಾಲಯ ಸರ್ಕಾರದ ವಶದಲ್ಲಿರುತ್ತದೆ' ಎಂದು ಹೇಳಿದ್ದರು.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿಯಲ್ಲಿ ಶ್ರೀ ಮಹಾಲಕ್ಷ್ಮೀ ದೇವಾಲಯವಿದೆ. ಇಲ್ಲಿ ಪ್ರತಿ ಮಂಗಳವಾರ, ಶುಕ್ರವಾರ ಹಾಗು ಭಾನುವಾರಗಳಂದು ವಿಶೇಷ ಪೂಜೆ ನಡೆಯುತ್ತದೆ. ಕಾರ್ತಿಕಮಾಸದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಲಕ್ಷಾಂತರ ಭಕ್ತರು ಈ ಸಮಯದಲ್ಲಿ ದೇವಿಯ ದರ್ಶನಕ್ಕಾಗಿ ಆಗಮಿಸುತ್ತಾರೆ.