ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರು; ಚಿರತೆ ಕೊಲ್ಲಲು ಸರ್ಕಾರದ ಆದೇಶ

|
Google Oneindia Kannada News

ತುಮಕೂರು, ಮಾರ್ಚ್ 01: ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ಬೈಚೇನಹಳ್ಳಿ ಗ್ರಾಮದಲ್ಲಿ ಆತಂಕ ಮೂಡಿಸಿರುವ ಚಿರತೆ ಕೊಲ್ಲಲು ಆದೇಶ ನೀಡಲಾಗುತ್ತದೆ. ಇದುವೆಗೂ ನಾಲ್ವರು ಚಿರತೆ ದಾಳಿಗೆ ಬಲಿಯಾಗಿದ್ದಾರೆ.

ಶನಿವಾರ ರಾತ್ರಿ ಗ್ರಾಮ ಪಂಚಾಯಿತಿ ಸದಸ್ಯ ಗಂಗ ಚಿಕ್ಕಣ್ಣ ಎಂಬುವವರ ಮೊಮ್ಮಗಳು ಮನೆಯ ಮುಂದೆ ಆಟವಾಡುತ್ತಿದ್ದಾಗ ಚಿರತೆ ದಾಳಿ ಮಾಡಿತ್ತು. ಚಿರತೆಯನ್ನು ಕೊಲ್ಲಲು ಗ್ರಾಮಸ್ಥರು ಸಹ ಒತ್ತಾಯಿಸಿದ್ದಾರೆ. ಸೋಮವಾರ ಸರ್ಕಾರ ಕಂಡಲ್ಲಿ ಗುಂಡಿಕ್ಕಲು ಆದೇಶ ನೀಡಲಿದೆ.

ವಿಡಿಯೋ; ತರೀಕೆರೆಯಲ್ಲಿ ರಾತ್ರಿ ಮನೆ ಬಾಗಿಲಿಗೇ ಬಂತು ಚಿರತೆವಿಡಿಯೋ; ತರೀಕೆರೆಯಲ್ಲಿ ರಾತ್ರಿ ಮನೆ ಬಾಗಿಲಿಗೇ ಬಂತು ಚಿರತೆ

ಅರಣ್ಯ ಸಚಿವ ಆನಂದ್ ಸಿಂಗ್ ಈ ಕುರಿತು ಹೇಳಿಕೆ ನೀಡಿದ್ದಾರೆ. "ತುಮಕೂರಿನಲ್ಲಿ ಮಗು ಬಲಿ ಪಡೆದಿರುವ ಚಿರತೆಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ನಾಳೆಯೇ ಅಧಿಕಾರಿಗಳಿಗೆ ಆದೇಶ ನೀಡುತ್ತೇನೆ" ಎಂದು ಸಚಿವರು ಹೇಳಿದ್ದಾರೆ.

ತುಮಕೂರು; ಅಜ್ಜನ ಎದುರೇ ಮೊಮ್ಮಗಳು ಚಿರತೆಗೆ ಬಲಿ ತುಮಕೂರು; ಅಜ್ಜನ ಎದುರೇ ಮೊಮ್ಮಗಳು ಚಿರತೆಗೆ ಬಲಿ

"ಒಂದು ಅಥವ ಎರಡು ಘಟನೆಗಳಾಗಿದ್ದರೆ ಸುಮ್ಮನೆ ಇರಬಹುದಿತ್ತು. ಆದರೆ, ಈಗಾಗಲೇ ನಾಲ್ಕು ಮಂದಿಯನ್ನು ಚಿರತೆ ಬಲಿ ಪಡೆದಿದೆ. ಹಾಗಾಗಿ ಕಾನೂನು ತೊಡಕಿಗಿಂತ ಜನರ ಪ್ರಾಣವೇ ನಮಗೆ ಮುಖ್ಯ" ಎಂದು ಆನಂದ್ ಸಿಂಗ್ ಹೇಳಿದರು.

 ಗುಂಡ್ಲುಪೇಟೆ ಬಳಿ ಅಪರೂಪದ ಕರಿ ಚಿರತೆ ಸಾವು ಗುಂಡ್ಲುಪೇಟೆ ಬಳಿ ಅಪರೂಪದ ಕರಿ ಚಿರತೆ ಸಾವು

ಆದೇಶ ನೀಡುವುದು ಅನಿವಾರ್ಯವಾಗಿದೆ

ಆದೇಶ ನೀಡುವುದು ಅನಿವಾರ್ಯವಾಗಿದೆ

"ಈಗಾಗಲೇ ನಾಲ್ಕು ಮಂದಿಯನ್ನು ಚಿರತೆ ಬಲಿ ಪಡೆದಿದೆ. ಯಾವುದೇ ಕಾನೂನಿನ ಸಮಸ್ಯೆ ಎದುರಾದರೂ ಈ ತೀರ್ಮಾನ ಕೈಗೊಳ್ಳುವುದು ಅನಿವಾರ್ಯವಾಗಿದೆ" ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದರು. ಸೋಮವಾರ ಚಿರತೆ ಕೊಲ್ಲುವ ಕಾರ್ಯಾಚರಣೆ ಆರಂಭವಾಗುವ ನಿರೀಕ್ಷೆ ಇದೆ.

10 ಲಕ್ಷ ರೂ. ಪರಿಹಾರ ಘೋಷಣೆ

10 ಲಕ್ಷ ರೂ. ಪರಿಹಾರ ಘೋಷಣೆ

ಬೈಚೇನಹಳ್ಳಿ ಗ್ರಾಮದಲ್ಲಿ ಶನಿವಾರ ಚಿರತೆ ದಾಳಿಯಿಂದ ಮೃತಪಟ್ಟ ಚಂದನ ಕುಟುಂಬದಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್ 10 ಲಕ್ಷ ರೂ. ಪರಿಹಾರವನ್ನು ಘೋಷಣೆ ಮಾಡಿದರು. ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ. ಸಿ. ಮಾಧುಸ್ವಾಮಿ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಪರಿಹಾರದ ಚೆಕ್ ವಿತರಣೆ

ಪರಿಹಾರದ ಚೆಕ್ ವಿತರಣೆ

ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಡಿ. ಸಿ. ಗೌರಿಶಂಕರ್ ಮೃತ ಬಾಲಕಿ ಚಂದನಾ ಕುಟುಂಬಕ್ಕೆ ವೈಯಕ್ತಿಕವಾಗಿ 2 ಲಕ್ಷ ಮೊತ್ತದ ಚೆಕ್ ವಿತರಣೆ ಮಾಡಿದರು. ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್, ಡಿಎಫ್‌ಒ ಗಿರೀಶ್ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿದರು.

ಪೊಲೀಸ್ ಬಂದೋಬಸ್ತ್

ಪೊಲೀಸ್ ಬಂದೋಬಸ್ತ್

ಚಿರತೆ ದಾಳಿ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವುದರಿಂದ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮತ್ತೊಂದು ಕಡೆ ತುಮಕೂರು ತಾಲೂಕಿನ ಹೊನ್ನುಡಿಕೆ ಗ್ರಾಮದಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿದೆ.

English summary
Karnataka government will issue shoot at sight order for man eater leopard at Tumakuru district. Leopard killed 4 people in one month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X