ಸರ್ಕಾರ ಸುಭದ್ರವಾಗಿದೆ, ಮುಂದೆಯೂ ಇರುತ್ತದೆ: ಪರಮೇಶ್ವರ್
ತುಮಕೂರು, ಮೇ 25: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸೋಲಿನ ಹೊಣೆಯನ್ನು ಜೆಡಿಎಸ್-ಕಾಂಗ್ರೆಸ್ ನ ನಾವೆಲ್ಲರೂ ಹೊರುತ್ತೇವೆ ಎಂದ ಡಿಸಿಎಂ ಜಿ. ಪರಮೇಶ್ವರ್, ಸರ್ಕಾರ ಈಗ ಸ್ಥಿರವಾಗಿದೆ - ಮುಂದೆಯೂ ಸ್ಥಿರವಾಗಿರುತ್ತದೆ ಎಂದು ದೃಢವಾಗಿ ಹೇಳಿದರು.
ಲೋಕಸಭೆ ಚುನಾವಣೆ : ಕರ್ನಾಟಕದಲ್ಲಿ ಸೋತ ಘಟಾನುಘಟಿ ನಾಯಕರು!
ಸರ್ಕಾರ ಸುಭದ್ರವಾಗಿದೆ. ಅದರಲ್ಲಿ ಅನುಮಾನವಿಲ್ಲ ಎಂದ ಅವರು. ರಮೇಶ್ ಜಾರಕಿಹೊಳಿ ಅವರು ಪಕ್ಷದಲ್ಲೇ ಇರುತ್ತಾರೆ. ಅವರು ಪಕ್ಷವನ್ನು ಬಿಟ್ಟು ಹೋಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ರಾಜೀನಾಮೆ ವಿಚಾರವಾಗಿ ಮಾತನಾಡಿ, ಸೋಲಿನಿಂದ ಸ್ವಾಭಾವಿಕವಾಗಿ ಅವರಿಗೆ ಬೇಸರ ಆಗಿದೆ. ಅವರು ಏನು ತೀಮಾ೯ನ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಸಿಎಂ ರಾಜೀನಾಮೆ ಕೊಡದಂತೆ ನಾವೆಲ್ಲಾ ಸೇರಿ ಮನವರಿಕೆ ಮಾಡಿದ್ದೇವೆ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಹೇಳಿದರು.
ಪರಮೇಶ್ವರ್ ಹಠಾವೋ ಕಾಂಗ್ರೆಸ್ ಬಚಾವೋ ಪೋಸ್ಟರ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
Comments
English summary
We will take responsibility for the Deve Gowda's defeat. The government is now stable -and will be stable said Parameshwar in Tumkur.he expressed confidant that Ramesh Jarkiholi stays in the party.
Story first published: Saturday, May 25, 2019, 18:10 [IST]