ತಾಕತ್ತಿದ್ರೆ RSS ಬ್ಯಾನ್ ಮಾಡ್ಲಿ: ಸಿದ್ದುಗೆ ಶಿವಣ್ಣ ಸವಾಲ್
ತುಮಕೂರು, ಜನವರಿ 10: ಆರ್ ಎಸ್ ಎಸ್. ಬಜರಂಗದಳ ಹಾಗೂ ಬಿಜೆಪಿಯವರು ಉಗ್ರಗಾಮಿಗಳೆಂದು ಹೇಳಿ ವಿವಾದವನ್ನು ಮೈಮೇಲೆ ಎಳೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.
ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಸೊಗುಡು ಶಿವಣ್ಣ, ಸಿದ್ದರಾಮಯ್ಯಗೆ ತಾಕತ್ತು ಇದ್ದರೆ ರ್ ಎಸ್ ಎಸ್ ಬ್ಯಾನ್ ಮಾಡಲಿ ಎಂದು ಸವಾಲು ಹಾಕಿದರು.
'ಬಿಜೆಪಿ, ಆರ್ ಎಸ್ ಎಸ್, ಬಜರಂಗದಳದವರೇ ಉಗ್ರಗಾಮಿಗಳು'
ಆರ್ ಎಸ್ ಎಸ್ ಬ್ಯಾನ್ ಮಾಡಿ ಈ ರೀತಿಯ ಹೇಳಿಕೆ ನೀಡಲಿ. ಜಾತಿ-ಧರ್ಮದ ಹೆಸರಲ್ಲಿ ಗಲಭೆ ಎಬ್ಬಿಸುತ್ತಿದ್ದಾರೆ. ಮೀರ್ ಸಾದೀಕ್ ತನ ಬಿಟ್ಟು ಸಮಾಜಕ್ಕೆ ಒಳ್ಳೆಯದನ್ನು ಮಾಡಲಿ ಎಂದು ಕೆಂಡಕಾರಿದರು.
ಸಿದ್ದರಾಮಯ್ಯ ತಮ್ಮ ಹೆಸರನ್ನು ಮೀರ್ ಸಾದಿಕ್ ಅಂತ ಬದಲಿಸಿಕೊಳ್ಳಲಿ, ಅವರಿಗೆ ಸಿದ್ದರಾಮಯ್ಯ ಎಂದು ಹೆಸರು ಇಟ್ಟಿರುವುದು ಅವರ ತಂದೆ-ತಾಯಿಯರ ದುರದೃಷ್ಟ ಎಂದು ಹರಿಯಾಯ್ದರು.
ಆರ್ ಎಸ್ ಎಸ್. ಬಜರಂಗದಳ ಹಾಗೂ ಬಿಜೆಪಿಯವರು ಉಗ್ರಗಾಮಿಗಳು ಎಂದು ಸಿದ್ದರಾಮಯ್ಯ ಅವರು ಬುಧವಾರ ಚಾಮರಾಜನಗರದಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಹಲವು ಆರ್ ಎಸ್ ಎಸ್ ಮುಖಂಡರು, ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.