ಶ್ರೀಗಳ ಅಂತಿಮ ದರ್ಶನಕ್ಕೆ ಬಾರದ ಮೋದಿ ಮೇಲೆ ಪರಂ ಗರಂ!
ತುಮಕೂರು, ಜನವರಿ 23: ಸೋಮವಾರದಂದು ಲಿಂಗೈಕ್ಯರಾದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಜಿ ಅವರ ಅಂತಿಮ ದರ್ಶನ ಪಡೆದಿದ್ದರೆ ಪ್ರಧಾನಿ ನರೇಂದ್ರ ಮೊದಿ ಅವರ ಘನತೆ ಹೆಚ್ಚುತ್ತಿತ್ತು ಎಂದು ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಹೇಳಿದ್ದಾರೆ.
ಗದ್ದುಗೆಯಲ್ಲಿ ಐಕ್ಯರಾದ ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳು
ಪ್ರಧಾನಿ ಮೋದಿ ಅವರು ಶ್ರೀಗಳ ಅಂತ್ಯಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ಅವರು ಯಾಕೆ ಭಾಗವಹಿಸಲಿಲ್ಲ, ಎಲ್ಲಿಗೆ ಹೋಗಿದ್ದರು ಎಂಬುದು ನನಗೆ ಗೊತ್ತಿಲ್ಲ, ಬೇಕಾಗಿಯೂ ಇಲ್ಲ. ಅದನ್ನು ವಿಚಾರಿಸುವಷ್ಟು ಸಣ್ಣ ಮನಸ್ಸಿನವನು ನಾನಲ್ಲ. ಆದರೆ ಮಾನವೀಯತೆಯ ಸಾಕಾರ ಮೂರ್ತಿಯಾದ ಶ್ರೀಗಳ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಭಾಗವಹಿಸಬೇಕಿತ್ತು. ಅದರಿಂದ ಅವರದೇ ಹುದ್ದೆಯ ಘನತೆ ಹೆಚ್ಚುತ್ತಿತ್ತು ಎಂದು ಕಾಂಗ್ರೆಸ್ ಮುಖಂಡ ಜಿ ಪರಮೇಶ್ವರ್ ಹೇಳಿದ್ದಾರೆ.
ಕರ್ನಾಟಕದ ಜನರಿಗೆ ಕೃತಜ್ಞತೆ ಸಲ್ಲಿಸಿದ ಎಚ್.ಡಿ.ಕುಮಾರಸ್ವಾಮಿ
111 ವರ್ಷ ವಯಸ್ಸಿನ ಶ್ರೀಗಳು ವಯೋಸಹಜ ಅನಾರೋಗ್ಯದಿಂದ ಜ.21 ರಂದು ಇಹಲೋಕ ತ್ಯಜಿಸಿದ್ದರು. ಶ್ರಿಗಳ ಅಗಲಿಕೆಗೆ ಸಂತಾಪ ಸೂಚಿಸಿ ಮೋದಿಯವರು ಸಾಲು ಸಾಲು ಟ್ವೀಟ್ ಮಾಡಿದ್ದರಾದರೂ, ಅಂತಿಮ ದರ್ಶನ ಪಡೆದಿರಲಿಲ್ಲ. ಕೇಂದ್ರ ಸರ್ಕಾರದ ಪರವಾಗಿ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಮುರಳೀಧರ ರಾವ್ ಭಾಗವಹಿಸಿದ್ದರು.
ಬಿಜೆಪಿ
ಪ್ರತಿಕ್ರಿಯೆ
ಪ್ರಧಾನಿ
ಮೋದಿ
ಅವರು
ಶ್ರೀಗಳ
ಅಂತ್ಯಕ್ರಿಯೆಯಲ್ಲಿ
ಭಾಗವಹಿಸುವ
ಇಚ್ಛೆ
ಹೊಂದಿದ್ದರು.
ಆದರೆ
ಸುರಕ್ಷತೆಯ
ದೃಷ್ಟಿಯಿಂದ
ಅವರು
ಹಾಜರಾಗಲು
ಸಾಧ್ಯವಾಗಲಿಲ್ಲ.
ಲಕ್ಷಾಂತರ
ನ
ಸೇರಿದ್ದ
ಆ
ಕಾರ್ಯಕ್ರಮದಲ್ಲಿ
ಪ್ರಧಾನಿಗಳು
ಭಾಗವಹಿಸಿದ್ದರೆ
ಜನರಿಗೆ
ಸಮಸ್ಯೆಯಾಗುತ್ತಿತ್ತು.
ಭದ್ರತೆಯನ್ನು
ನಿಯೋಜಿಸುವುದು
ಕಷ್ಟವಾಗುತ್ತಿತ್ತು
ಎಂದು
ಬಿಜೆಪಿ
ಪ್ರತಿಕ್ರಿಯೆ
ನೀಡಿದೆ.