ಆ ಮಸೀದಿ ಮುಂದೆ ಸಿಎಂ ಸಿದ್ದು ಹೋಗಿದ್ದೇಕೆ?
ತುಮಕೂರು: ನವೆಂಬರ್ 16: ತುಮಕೂರಿಗೆ ಮಂಗಳವಾರ ಬರ ಪರಿಶೀಲನೆಗೆ ಹೋಗಿದ್ದರು. ಈ ವೇಳೆ ಚಿಕ್ಕನಾಯಕನಹಳ್ಳಿಗೂ ಹೊಗಿದ್ದರು ಆದರೆ ಎಲ್ಲರು ಆ ಮಸೀದಿ ಮುಂದೆ ಹೋಗಬಾರದು ಎಂದುಕೊಳ್ಳುತ್ತಿರುವಾಗಲೇ. ಅವೆಲ್ಲಾ ಮೌಢ್ಯ ಎಂದು ಸಿಎಂ ಹೊಗಿಯೇ ಬಿಟ್ಟರು.
ಸಿಎಂ ಸಿದ್ದರಾಮಯ್ಯ ಅವರು ಮೌಢ್ಯ ಎಂದು ಹೇಳಿ ಹೋದ ಮಸೀದಿ ಯಾವುದು ಎಂದರೆ ಚಿಕ್ಕನಾಯಕನಹಳ್ಳಿಯಲ್ಲಿರುವ ತಾತಯ್ಯನ ಗೋರಿ, ಅಥವಾ ಮಸೀದಿ.[ತುಮಕೂರಿನ ಬರಪೀಡಿತ ತಾಲ್ಲೂಕುಗಳಿಗೆ ಸಿಎಂ ಭೇಟಿ]
ಈ
ಗೋರಿ
ಬಹಳ
ಪುರಾತನವಾಗಿದ್ದು
ಹಿಂದೂ
ಮತ್ತು
ಮುಸ್ಲೀಂ
ಭಾಂಧವ್ಯ
ಹೊಂದಿರುವ
ಮಸೀದಿಯಾಗಿದೆ
ಕರ್ನಾಟಕದವರು
ಇದನ್ನು
ತಾತಯ್ಯನ
ಗೋರಿ
ಎಂದು
ಕೂಗುವುದರಿಂದ
ಇದೇ
ಹೆಸರೇ
ಪ್ರಚಲಿತದಲ್ಲಿದೆ.
ಇಲ್ಲಿ
ಮಕ್ಕಳ
ಸಣ್ಣ
ಪುಟ್ಟ
ರೋಗಗಳಿಗೆ
,
ದೊಡ್ಡವರ
ಕಷ್ಟಗಳ
ನಿವಾರಣೆ
ಮತ್ತು
ದೆವ್ವ
ಪೀಡೆಗಳ
ಕಾಟ
ತಪ್ಪಿಸಲು
ಜನರು
ಬಹಳ
ದೂರದಿಂದ
ಇಲ್ಲಿಗೆ
ಬರುತ್ತಾರೆ.[ನೋಟು
ಬ್ಯಾನ್:
ಜೇಟ್ಲಿಗೆ
5
ಸಲಹೆ
ನೀಡಿದ
ಸಿದ್ದರಾಮಯ್ಯ]
ಹಾಗೆಯೇ ಅಧಿಕಾರಸ್ಥರು, ರಾಜಕಾರಣಿಗಳು ಈ ಗೋರಿಯನ್ನು ಕಂಡರೆ ಹೆದರುತ್ತಾರೆ. ಎಕೆಂದರೆ ಈ ಗೋರಿಯ ಮುಂದೆ ವಾಹನದಲ್ಲಿ , ಅಥವಾ ವಾಹನ ಚಲಾಯಿಸಿಕೊಂಡು ಹೋದರೆ ಅವರು ಮುಂದಿನ ಬಾರಿಗೆ ಅಧಿಕಾರದಲ್ಲಿ ಇರುವುದಿಲ್ಲ ಎಂಬುದು ಇಲ್ಲಿನ ಪ್ರತೀತಿ. ಈ ಹಿಂದೆ ಈ ರೀತಿಯ ಅನೇಕ ಘಟನೆಗಳಿಂದ ಶಾಸಕರು, ಅಧಿಕಾರಿಗಳು ತಮ್ಮ ಸ್ಥಾನದಿಂದ ಕೆಳಗಿಳಿದಿರುವ ಉದಾಹರಣೆಗಳಿವೆ.
ಸಿಎಂ ಸಿದ್ದರಾಮಯ್ಯ ಅವರು ಮೌಢ್ಯ ಎಂದು ಮಹದೇಶ್ವರ ಬೆಟ್ಟಕ್ಕೆ ಹೋಗಿ ಬಂದಿದ್ದು ನೋಡಿದ್ದೇವೆ. ಹಾಗೂ ಈಗಲೂ ಈ ರೀತಿಯ ಮತ್ತೊಂದು ಮೌಢ್ಯಕ್ಕೆ ಸೆಡ್ಡು ಎಂಬಂತೆ ಸಿಎಂ ಇಲ್ಲಿಯೂ ತಮ್ಮ ನಿರ್ಧಾರ ಬದಲಿಸಿಲ್ಲ. ಹೀಗಾಗಿ ಎಲ್ಲ ಪಕ್ಷಗಳು ಮುಂದಿನ ಚುನಾವಣೆಗೆ ಸಜ್ಜಾಗುತ್ತಿರುವ ವೇಳೆಯಲ್ಲಿ ಅಯ್ಯೋ ನಮ್ಮ ಮುಖ್ಯಮಂತ್ರಿಗಳು ಹೀಗೆ ಮಾಡಿಬಿಟ್ಟರಲ್ಲಾ ಎಂದು ಚಿಕ್ಕನಾಯಕನಹಳ್ಳಿಯ ಕಾಂಗ್ರೆಸ್ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.