ಕೊರಟಗೆರೆ ಬಳಿ ಕಾರು ಮರಕ್ಕೆ ಡಿಕ್ಕಿ: ಇಬ್ಬರ ಸಾವು
ಶುಕ್ರವಾರ ಬೆಳಗಿನ ಜಾವ ಸುಮಾರು 3 ಗಂಟೆಗೆ ನಡೆದಿರುವ ಅಪಘಾತ; ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರ ಸಾವು.
ಕೊರಟಗೆರೆ (ತುಮಕೂರು), ಮಾರ್ಚ್ 25: ಕೊರಟಗೆರೆ ತಾಲೂಕಿನ ಹೊರವಲಯದಲ್ಲಿರುವ ಹೊಸಹಳ್ಳಿಯ ಬಳಿ ಮರಕ್ಕೆ ಕಾರು ಡಿಕ್ಕಿ ಹೊಡೆದು ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರನ್ನು ಮಂಜುನಾಥ್ (34), ರವಿಕುಮಾರ್ (22) ಎಂದು ಗುರುತಿಸಿದ್ದಾರೆ. ಶುಕ್ರವಾರ ಬೆಳಗಿನ ಜಾವ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಂಜುನಾಥ್ ಅವರು, ಕಳೆದ ಐದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರೆಂದು ಹೇಳಲಾಗಿದೆ. ಈ ಕಾರು ಮಧುಗಿರಿಯಿಂದ ಕೊರಟಗೆರೆ ಕಡೆಗೆ ಹೊರಟಿತ್ತು ಎಂದು ಹೇಳಲಾಗಿದೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments
English summary
Two men died on spot when their car hit a tree at 3 am on Friday, near Hosahalli, on the outskirts of Koratagere, Tumkur district. The travellers named Ravikumar (22), Manjunath (34) died on spot.
Story first published: Saturday, March 25, 2017, 8:47 [IST]