ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರು : ಭೀಕರ ರಸ್ತೆ ಅಪಘಾತ, 6 ಸಾವು

|
Google Oneindia Kannada News

ತುಮಕೂರು, ಜೂನ್ 28 : ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ. ಅಮೃತೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುಣಿಗಲ್ ತಾಲೂಕಿನ ಸಿದ್ದಾಪುರ ಬಳಿ ಕಾರು ಪಲ್ಟಿಯಾಗಿ 6 ಜನರು ಮೃತಪಟ್ಟಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಯಡಿಯೂರಿಂದ ಬೆಂಗಳೂರಿಗೆ ತೆರಳುವ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು, ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ.

ಯಶವಂತಪುರ ಫ್ಲೈ ಓವರ್‌ ಮೇಲಿಂದ ಬಿದ್ದ ಲಾರಿ, ಕ್ಲೀನರ್ ಸಾವುಯಶವಂತಪುರ ಫ್ಲೈ ಓವರ್‌ ಮೇಲಿಂದ ಬಿದ್ದ ಲಾರಿ, ಕ್ಲೀನರ್ ಸಾವು

6 killed in road accident at Kunigal

ಮೃತಪಟ್ಟವರನ್ನು ಬೆಂಗಳೂರಿನ ಸಂಜಯ ನಗರ ನಿವಾಸಿಗಳು ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳು ಸೇರಿ 11 ಮಂದಿ ಕಾರಿನಲ್ಲಿದ್ದರು. ಇವರಲ್ಲಿ 4 ಮಹಿಳೆಯರು ಸೇರಿ 6 ಜನರು ಮೃತಪಟ್ಟಿದ್ದಾರೆ.

ಹೆಲ್ಮಟ್ ಧರಿಸದಿರುವುದು, ಅತಿವೇಗದ ಚಾಲನೆ : ಅಪಾಯಕಾರಿ ಅಂಶಗಳುಹೆಲ್ಮಟ್ ಧರಿಸದಿರುವುದು, ಅತಿವೇಗದ ಚಾಲನೆ : ಅಪಾಯಕಾರಿ ಅಂಶಗಳು

ಯಡಿಯೂರು ಸಿದ್ದಲಿಂಗೇಶ್ವರ ದೇವಾಲಯಕ್ಕೆ ಹೋಗಿ ವಾಪಸ್ ಬರುವಾಗ ಈ ದುರ್ಘಟನೆ ನಡೆದಿದೆ. ಅಮೃತೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮೃತಪಟ್ಟವರ ಹೆಸರು ಇನ್ನೂ ತಿಳಿದುಬಂದಿಲ್ಲ.

ಗೀತಾ ವಿಷ್ಣು ಹಿಟ್ ಎಂಡ್ ರನ್ ಪ್ರಕರಣಕ್ಕೆ ಸ್ಫೋಟಕ ತಿರುವುಗೀತಾ ವಿಷ್ಣು ಹಿಟ್ ಎಂಡ್ ರನ್ ಪ್ರಕರಣಕ್ಕೆ ಸ್ಫೋಟಕ ತಿರುವು

English summary
6 killed in road accident at Kunigal, Tumakuru district on June 28, 2019. Innova car driver lost control and hit to road divider.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X